ಕರ್ನಾಟಕ

karnataka

ಪ್ರತಿಷ್ಠೆಯ ಚುನಾವಣೆ ಗೆದ್ದಿದ್ದೇನೆ : ಶಾಸಕ ಎನ್ ಮಹೇಶ್

By

Published : Oct 29, 2020, 7:31 PM IST

Updated : Oct 29, 2020, 7:49 PM IST

ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಚುನಾವಣೆ ನನಗೆ ಪ್ರತಿಷ್ಠೆಯಾಗಿತ್ತು ಇದನ್ನು ನಾನು ಗೆದ್ದಿದ್ದೇನೆ ಎಂದು ಶಾಸಕ ಎನ್ .ಮಹೇಶ್ ತಿಳಿಸಿದ್ದಾರೆ.

ಶಾಸಕ ಎನ್ ಮಹೇಶ್
MLA N Mahesh

ಕೊಳ್ಳೇಗಾಲ: ಬಿಜೆಪಿ ಸದಸ್ಯರ ಜೊತೆ ಮೈತ್ರಿ ಮಾಡಿಕೊಂಡು ಪ್ರತಿಷ್ಟೆ ಕಣವಾಗಿದ್ದ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಎದುರಿಸಿ ಗೆದ್ದಿದ್ದೇನೆ ಎಂದು ಶಾಸಕ ಎನ್.ಮಹೇಶ್ ತಿಳಿಸಿದರು.

ಕೊಳ್ಳೇಗಾಲ ಸ್ಥಳೀಯ ಶಾಸಕನಾಗಿ ಅಧಿಕಾರದಲ್ಲಿರುವ ನನಗೆ ನನ್ನ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವುದು ಅನಿವಾರ್ಯ ಹಾಗೂ ಸವಾಲಾಗಿತ್ತು. ಈ ಹಿನ್ನಲೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದ್ದೇನೆ.

ಶಾಸಕ ಎನ್ ಮಹೇಶ್
ಈ ಜಯ ನನಗೆ ಬಹಳ ಸಂತಸ ತಂದಿದೆ. ಆದರೆ ಇದು ‌ನನ್ನ ಮೇಲಿನ ಜವಬ್ದಾರಿಯನ್ನೂ ಸಹ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಕೊಳ್ಳೇಗಾಲ ಅಭಿವೃದ್ಧಿಗೆ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ ಎಂದರು.

ಕೊರೊನಾ ಸಮಯವಾಗಿರುವುದರಿಂದ ರಾಜ್ಯ ಸರ್ಕಾರ ಆರ್ಥಿಕ‌ ಮುಗಟ್ಟು ಎದುರಿಸುತ್ತಿದ್ದು, ಇದರ ನಡುವೆ ಕೊಳ್ಳೇಗಾಲದಲ್ಲಿ ನೆನೆಗುದ್ದಿಗೆ ಬಿದ್ದಿರುವ ಕಾಮಗಾರಿಗಳನ್ನು ಮುಗಿಸಲು ನಿರ್ಧರಿಸಿದ್ದೇನೆ. ಈ ಕಾರ್ಯಕ್ಕೆ ಮುಖ್ಯಮಂತ್ರಿಗಳ ಜೊತೆ ಮಾತನಾಡಲು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನನಗೆ ಸಾಥ್ ನೀಡಲಿದ್ದಾರೆ ಎಂದರು.

Last Updated : Oct 29, 2020, 7:49 PM IST

ABOUT THE AUTHOR

...view details