ಕರ್ನಾಟಕ

karnataka

ETV Bharat / state

ಬಿಜೆಪಿಗೆ ಹೋಗಲ್ಲ, ಬಿಎಸ್​ವೈ ಸರ್ಕಾರದಲ್ಲಿ ಮಂತ್ರಿಯೂ ಆಗಲ್ಲ: ಎನ್.ಮಹೇಶ್ ಸ್ಪಷ್ಟನೆ

ಸೌಜನ್ಯಕ್ಕಾಗಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಿಎಂ ಆಗಿದ್ದಕ್ಕೆ ಅಭಿನಂದಿಸಿದೆ‌. ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ ಎಂದು ಶಾಸಕ ಎನ್.ಮಹೇಶ್ ಸ್ಪಷ್ಟಪಡಿಸಿದ್ರು.

By

Published : Aug 4, 2019, 3:43 PM IST

ಎನ್.ಮಹೇಶ್, ಬಿಎಸ್​ಪಿ ಉಚ್ಛಾಟಿತ ಶಾ

ಚಾಮರಾಜನಗರ:ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ, ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಯೂ ಆಗಲ್ಲ ಎಂದು ಬಿಎಸ್​ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್ ಹೇಳಿದರು.

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌಜನ್ಯಕ್ಕಾಗಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಿಎಂ ಆಗಿದ್ದಕ್ಕೆ ಅಭಿನಂದಿಸಿದೆ‌. ಆದರೆ, ಮಾಧ್ಯಮಗಳಲ್ಲಿ ಹರಿದಾಡಿದ ಕಪೋಲಕಲ್ಪಿತ ಸುದ್ದಿ ನಿಜಕ್ಕೂ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಎನ್.ಮಹೇಶ್, ಬಿಎಸ್​ಪಿ ಉಚ್ಛಾಟಿತ ಶಾ

ಬಿಎಸ್​ಪಿಯಲ್ಲಿ ಇದ್ದೇನೆ, ಬಿಎಸ್​ಪಿಯಲ್ಲೇ ಇರುತ್ತೇನೆ. ಸಂವಹನ ಕೊರತೆಯಿಂದ ಹೀಗಾಗಿದೆ. ಪಕ್ಷದ ವರಿಷ್ಟೆ ಮಾಯಾವತಿ ಅವರಿಗೆ ಸತ್ಯ ಸಂಗತಿ ಅರಿವು ಮಾಡಿಸುತ್ತೇನೆ. ಪಕ್ಷದ ತೀರ್ಮಾನದಂತೆ ಸದನದಿಂದ ಹೊರಗುಳಿದಿದ್ದೆ ಎಂದರು.

ABOUT THE AUTHOR

...view details