ಕರ್ನಾಟಕ

karnataka

ETV Bharat / state

ತಾನಿಲ್ಲದ ವೇಳೆ ಪತ್ನಿಯೊಂದಿಗೆ ರಾಸಲೀಲೆ: ದೊಣ್ಣೆಯಲ್ಲಿ ಹೊಡೆದು ಯುವಕನ ಕೊಂದ ಪತಿ! - ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮ

ಪತಿ ತನ್ನ ಪತ್ನಿಯ ಪ್ರಿಯಕರನನ್ನು ದೊಣ್ಣೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ.

Chamarajanagar
ಪತ್ನಿಯ ಪ್ರಿಯಕರನನ್ನು ಕೊಂದ ಪತಿ

By

Published : May 20, 2021, 11:56 AM IST

Updated : May 20, 2021, 4:37 PM IST

ಚಾಮರಾಜನಗರ:ವಿವಾಹೇತರ ಸಂಬಂಧ ವಿಚಾರವಾಗಿ ಪತಿ ತನ್ನ ಪತ್ನಿಯ ಪ್ರಿಯಕರನನ್ನು ದೊಣ್ಣೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ.

ಬಸವಶೆಟ್ಟಿ (28) ಕೊಲೆಯಾದ ಯುವಕ. ಶಿವಣ್ಣ ಕೊಲೆ ಮಾಡಿರುವ ಆರೋಪಿ. ಶಿವಣ್ಣನ ಪತ್ನಿಯೊಂದಿಗೆ ಬಸವಶೆಟ್ಟಿ ವಿವಾಹೇತರ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಬುಧವಾರ ರಾತ್ರಿ ಪತ್ನಿ ಹಾಗೂ ಆಕೆಯ ಪ್ರಿಯಕರ ಒಟ್ಟಿಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಇದರಿಂದ ಕುಪಿತಗೊಂಡ ಶಿವಣ್ಣ, ದೊಣ್ಣೆಯಿಂದ ಬಸವಶೆಟ್ಟಿ ತಲೆಗೆ ಹೊಡೆದಿದ್ದಾನೆ. ಬಳಿಕ ಆತ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಅಸುನೀಗಿದ್ದು, ಸದ್ಯ ಆರೋಪಿ ಗುಂಡ್ಲುಪೇಟೆ ಪೊಲೀಸರ ವಶದಲ್ಲಿದ್ದಾನೆ.

ಓದಿ:ಆಕ್ಸಿಜನ್ ದುರಂತ: ಚಾಮರಾಜನಗರ ಡಿಸಿ ಡಾ.ಎಂ.ಆರ್‌.ರವಿ ಎತ್ತಂಗಡಿ?

Last Updated : May 20, 2021, 4:37 PM IST

ABOUT THE AUTHOR

...view details