ಕರ್ನಾಟಕ

karnataka

ETV Bharat / state

ಕುತೂಹಲ ಮೂಡಿಸಿದ ಚಾಮರಾಜನಗರ ಲೋಕ ಸಮರ: ಹೆಚ್​​ಎಸ್​​ಎಂ ಇಲ್ಲದ ಕ್ಷೇತ್ರದಲ್ಲಿ ಜಯ ಯಾರಿಗೆ!? - chamarajanagar

ಕಳೆದ 6 ಚುನಾವಣೆಯಲ್ಲಿ ಹೆಚ್​​ಎಸ್​​​​​ಎಂ ಬೆಂಬಲಿಸಿದ್ದವರೇ ಗೆಲುವು ಸಾಧಿಸಿದ್ದು, ಮಹದೇವಪ್ರಸಾದ್ ಇಲ್ಲದ ಲೋಕ ಸಮರದಲ್ಲಿ ಜಯ ಯಾರಿಗೆ ಎಂಬ ಕುತೂಹಲ ಮೂಡಿದೆ.

ಮಹದೇವಪ್ರಸಾದ್

By

Published : Mar 29, 2019, 6:23 PM IST

Updated : Mar 29, 2019, 7:35 PM IST

ಚಾಮರಾಜನಗರ: ಸತತ 5 ಬಾರಿ ವಿವಿಧ ಪಕ್ಷಗಳಿಂದ ಆಯ್ಕೆಯಾಗಿದ್ದ ಹೆಚ್.ಎಸ್.ಮಹದೇವಪ್ರಸಾದ್ ಲೋಕ ಚುನಾವಣೆಯಲ್ಲಿ ತಾವಿದ್ದ ಪಕ್ಷಕ್ಕೆ ಗೆಲುವು ತಂದು ಕೊಡುತ್ತಿದ್ದರು.

ಹೌದು, ೧೯೯೯ ರಿಂದ ಹೆಚ್.ಎಸ್.ಮಹದೇವಪ್ರಸಾದ್ ಬೆಂಬಲಿತ ಪಕ್ಷವೇ ಲೋಕ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿತ್ತು. ೧೯೯೬, ೧೯೯೮, ೧೯೯೯, ೨೦೦೪, ೨೦೦೯, ೨೦೧೪ರ ಚುನಾವಣೆಯಲ್ಲಿ ಹೆಚ್​ಎಸ್​​ಎಂ ಬೆಂಬಲಿತ ಅಭ್ಯರ್ಥಿಗಳೇ ವಿವಿಧ ಪಕ್ಷಗಳಿಂದ ಆಯ್ಕೆಯಾಗಿದ್ದಾರೆ.

೧೯೯೬ರಲ್ಲಿ ಜನತಾ ದಳದ ಅಭ್ಯರ್ಥಿ ಎ.ಸಿದ್ದರಾಜು ಅವರನ್ನು ಕಣಕ್ಕಿಳಿಸಿ ವಿ.ಶ್ರೀನಿವಾಸಪ್ರಸಾದ್ ಅವರನ್ನು ಸೋಲಿಸಿದರು. ೧೯೯೮ರ ಮಧ್ಯಂತರ ಚುನಾವಣೆಯಲ್ಲೂ ಎ.ಸಿದ್ದರಾಜು ವಿ.ಶ್ರೀ ಅವರನ್ನು ಮಣಿಸಿದರು. ಬಳಿಕ, ಸಂಯುಕ್ತ ದಳ ಸೇರಿದ ಹೆಚ್​ಎಸ್​​ಎಂ ಜೆಡಿಯು ಅಭ್ಯರ್ಥಿ ವಿ.ಶ್ರೀ ಪರವಾಗಿ ನಿಂತು ಕಾಂಗ್ರೆಸ್​​ನಿಂದ ನಿಂತಿದ್ದ ಎ‌.ಸಿದ್ದರಾಜುರನ್ನು ಮಣಿಸಿದರು. ಬಳಿಕ ಜೆಡಿಯು ತೊರೆದು ಜೆಡಿಎಸ್ ಸೇರಿದ್ದ ಅವರು ೨೦೦೪ರ ತಮ್ಮ ಪಕ್ಷದ ಅಭ್ಯರ್ಥಿ ಕಾಗಲವಾಡಿ ಎಂ.ಶಿವಣ್ಣರನ್ನು ಗೆಲ್ಲಿಸಿಕೊಂಡು ಬಂದರು.

ಬಳಿಕ, ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಹೆಚ್​ಎಸ್​ಎಂ ೨೦೦೯ ಮತ್ತು ೨೦೧೪ರಲ್ಲಿ ಕಾಂಗ್ರೆಸ್​​ನಿಂದ ಸ್ಪರ್ಧಿಸಿದ್ದ ಆರ್.ಧ್ರುವನಾರಾಯಣರನ್ನು ೨ ಬಾರಿ ಲೋಕ ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಿದ್ದರು.

ಜಿಲ್ಲಾ ರಾಜಕಾರಣದಲ್ಲಿ ಕ್ಯಾಪ್ಟನ್​ನಂತಿದ್ದ ಹೆಚ್.ಎಸ್.ಮಹದೇವಪ್ರಸಾದ್ ೨೦೧೭ರಲ್ಲಿ ನಿಧನರಾಗಿದ್ದು, ಅವರಿಲ್ಲದ ಈ ಹೊತ್ತಿನಲ್ಲಿ ಯಾವ ಅಭ್ಯರ್ಥಿ ಗೆಲುವು ಸಾಧಿಸಬಹುದು ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

Last Updated : Mar 29, 2019, 7:35 PM IST

For All Latest Updates

ABOUT THE AUTHOR

...view details