ಕರ್ನಾಟಕ

karnataka

By

Published : Apr 19, 2022, 8:19 AM IST

ETV Bharat / state

ಮುಂದಿನ ಬಾರಿ ಚಾಮುಂಡೇಶ್ವರಿಯಲ್ಲೇ ಗೆದ್ದು ಹೆಚ್​ಡಿಕೆ ಸಿಎಂ ಆಗ್ತಾರೆ: ಎಂಎಲ್​ಸಿ ಮಂಜೇಗೌಡ

ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಹೆಚ್.ಡಿ.ಕುಮಾರಸ್ವಾಮಿ ಗೆದ್ದು, ಸಿಎಂ ಆಗುತ್ತಾರೆ ಎಂದು ಜೆಡಿಎಸ್ ನಾಯಕ ಮಂಜೇಗೌಡ ತಿಳಿಸಿದರು.

ಚಾಮರಾಜನಗರ:ಮುಂಬರುವ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಹೆಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಮಾಡೇ ಮಾಡುತ್ತಾರೆ. ಇದು 100ಕ್ಕೆ 100 ರಷ್ಟು ಸತ್ಯ ಎಂದು ವಿಧಾನ ಪರಿಷತ್​ ಸಭಾಪತಿ ಸದಸ್ಯ, ಜೆಡಿಎಸ್ ನಾಯಕ ಮಂಜೇಗೌಡ ತಿಳಿಸಿದರು.

ಹನೂರಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಹೆಚ್​ಡಿಕೆ ಚಾಮುಂಡೇಶ್ವರಿಯಿಂದಲೇ ಸ್ಪರ್ಧಿಸಬೇಕೆಂದು ನಾವೆಲ್ಲಾ ಮುಖಂಡರು ಒತ್ತಾಯಿಸಿದ್ದೇವೆ, ಅಲ್ಲೇ ಸ್ಪರ್ಧಿಸಿ ಗೆದ್ದು ಸಿಎಂ ಆಗುತ್ತಾರೆ. ಜಿಟಿಡಿ ನನ್ನ ಸ್ನೇಹಿತರು, ಮೇಧಾವಿಗಳು ಆದರೆ 100ಕ್ಕೆ 100 ಅವರು ಜೆಡಿಎಸ್​​ನಲ್ಲಿ ಇರುವುದಿಲ್ಲ. ಈಗಾಗಲೇ ನಮ್ಮ ಪಕ್ಷದಿಂದ ವಿಮುಖರಾಗಿದ್ದಾರೆ ಎಂದು ಹೇಳಿದರು.

ಎಂಎಲ್​ಸಿ ಮಂಜೇಗೌಡ

ಹೆಚ್​ಡಿಕೆ ಬರೀ ನಾಮಪತ್ರ ಸಲ್ಲಿಸಿ ತೆರಳಲಿ ನಾವು ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ, ಇಡೀ ದೇಶದಲ್ಲಿ ಯಾವ ಕ್ಷೇತ್ರಕ್ಕೂ ದೇವರ ಹೆಸರಿಲ್ಲ ಚಾಮುಂಡೇಶ್ವರಿ ಒಂದನ್ನು ಬಿಟ್ಟು. ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಅಲ್ಲೇ ಸ್ಪರ್ಧಿಸುತ್ತಾರೆ ಮತ್ತು ಮುಖ್ಯಮಂತ್ರಿ ಆಗಿ ದೇಶಕ್ಕೆ ಮಾದರಿಯಾಗುವ ಕ್ಷೇತ್ರವನ್ನಾಗಿಸುತ್ತಾರೆ ಎಂದರು.

(ಇದನ್ನೂ ಓದಿ: ನಾನು ಮಣ್ಣಿಗೆ ಹೋಗುವ ಮುನ್ನ ದಲಿತ ವ್ಯಕ್ತಿಯನ್ನು ಸಿಎಂ ಮಾಡುವೆ: ಹೆಚ್​ಡಿಕೆ)

ABOUT THE AUTHOR

...view details