ಚಾಮರಾಜನಗರ:ಮುಂಬರುವ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಹೆಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಮಾಡೇ ಮಾಡುತ್ತಾರೆ. ಇದು 100ಕ್ಕೆ 100 ರಷ್ಟು ಸತ್ಯ ಎಂದು ವಿಧಾನ ಪರಿಷತ್ ಸಭಾಪತಿ ಸದಸ್ಯ, ಜೆಡಿಎಸ್ ನಾಯಕ ಮಂಜೇಗೌಡ ತಿಳಿಸಿದರು.
ಹನೂರಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಹೆಚ್ಡಿಕೆ ಚಾಮುಂಡೇಶ್ವರಿಯಿಂದಲೇ ಸ್ಪರ್ಧಿಸಬೇಕೆಂದು ನಾವೆಲ್ಲಾ ಮುಖಂಡರು ಒತ್ತಾಯಿಸಿದ್ದೇವೆ, ಅಲ್ಲೇ ಸ್ಪರ್ಧಿಸಿ ಗೆದ್ದು ಸಿಎಂ ಆಗುತ್ತಾರೆ. ಜಿಟಿಡಿ ನನ್ನ ಸ್ನೇಹಿತರು, ಮೇಧಾವಿಗಳು ಆದರೆ 100ಕ್ಕೆ 100 ಅವರು ಜೆಡಿಎಸ್ನಲ್ಲಿ ಇರುವುದಿಲ್ಲ. ಈಗಾಗಲೇ ನಮ್ಮ ಪಕ್ಷದಿಂದ ವಿಮುಖರಾಗಿದ್ದಾರೆ ಎಂದು ಹೇಳಿದರು.