ಚಾಮರಾಜನಗರ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಕಾಡಿನೊಳಗೆ ಗಂಡಾನೆಯೊಂದು ಮೃತಪಟ್ಟಿರುವ ಘಟನೆ ನಡೆದಿದೆ.
ಬಂಡೀಪುರ ಕಾಡೊಳಗೆ ಆನೆ ಸತ್ತಿದ್ದನ್ನು ತಿಳಿಸಿದವು ಹದ್ದುಗಳು - Gopalaswamy Hill Forest Zone
ಹದ್ದುಗಳ ಹಾರಾಟದಿಂದಾಗಿ ಆನೆಯೊಂದು ಮೃತಪಟ್ಟಿರುವುದು ತಿಳಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದಲ್ಲಿ ನಡೆದಿದೆ.
![ಬಂಡೀಪುರ ಕಾಡೊಳಗೆ ಆನೆ ಸತ್ತಿದ್ದನ್ನು ತಿಳಿಸಿದವು ಹದ್ದುಗಳು chamarajanagara](https://etvbharatimages.akamaized.net/etvbharat/prod-images/768-512-5338856-thumbnail-3x2-mysjpg.jpg)
ಬಂಡೀಪುರ ಕಾಡೊಳಗೆ ಆನೆ ಸತ್ತಿದ್ದನ್ನು ತಿಳಿಸಿದವು ಹದ್ದುಗಳು
ಕಲಿಗೌಡನಹಳ್ಳಿ ಬೀಟಿನ ತಾರೆಮರದ ಕೊಳಚಿ ಎಂಬಲ್ಲಿ ಅಂದಾಜು 50 ವರ್ಷದ ಗಂಡಾನೆ ಕಳೇಬರ ಪತ್ತೆಯಾಗಿದೆ. ವಯೋಸಹಜವಾಗಿ ಮೃತಪಟ್ಟಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದ್ದು, ಆನೆ ಮೃತಪಟ್ಟು 3-4 ದಿನಗಳು ಕಳೆದಿರಬಹುದು ಎಂದು ಮೂಲಗಳು ತಿಳಿಸಿವೆ.
ಹದ್ದುಗಳು ಹಾರಾಡುತ್ತಿದ್ದಿದ್ದನ್ನು ಗಮನಿಸಿದ ಸಿಬ್ಬಂದಿ ಸ್ಥಳಕ್ಕೆ ತೆರಳಿದ ವೇಳೆ ಆನೆ ಮೃತಪಟ್ಟಿರುವುದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದ್ದು ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ.