ಕರ್ನಾಟಕ

karnataka

ETV Bharat / state

ಚಾಮರಾಜನಗರ: ಪಿಎಸ್ಐ ಸೇರಿದಂತೆ ಐವರು ಪೊಲೀಸರ ಮೇಲೆ ಗುಂಪು ಹಲ್ಲೆ - ಚಾಮರಾಜನಗರ ಪಿಎಸ್ಐ ಮೇಲೆ ಹಲ್ಲೆ

ಜಾತಿನಿಂದನೆ ಕೇಸ್ ಆರೋಪಿ ಬಂಧಿಸಲು ಹೋದಾಗ ಬೇಗೂರು ಪಿಎಸ್ಐ ಸೇರಿದಂತೆ ಐವರು ಪೊಲೀಸರ ಮೇಲೆ ಗುಂಪು ಹಲ್ಲೆ ನಡೆಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ಲ್ಲಿ ನಡೆದಿದೆ.

ಬೇಗೂರು
ಬೇಗೂರು

By

Published : Jan 12, 2022, 10:40 AM IST

ಚಾಮರಾಜನಗರ: ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಪಿಎಸ್ಐ ಸೇರಿದಂತೆ ಐವರು ಪೊಲೀಸರ ಮೇಲೆ ಗುಂಪು ಹಲ್ಲೆ ನಡೆಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ ಬೇಗೂರು ಸಮೀಪದ ಒಣಕನಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಜಾತಿನಿಂದನೆ ಕೇಸ್​ ಆರೋಪಿ ಸಿದ್ದರಾಜು ಎಂಬಾತನನ್ನು ಬಂಧಿಸಲು ತೆರಳಿದ್ದ ಬೇಗೂರು ಪಿಎಸ್ಐ ರಿಹಾನಾಬೇಗಂ, ಎಎಸ್ಐ ನಾಗರಾಜು, ಕಾನ್ಸ್‌ಟೇಬಲ್​ಗಳಾದ ಗಣೇಶ್, ನಾಗೇಂದ್ರ ಹಾಗೂ ನಾಗೇಶ್ ಎಂಬುವರನ್ನು ಆರೋಪಿ ಸಂಬಂಧಿಕರು, ಸುತ್ತಮುತ್ತಲಿನ ಮನೆಯವರು ಎಳೆದಾಡಿ ಬೈದು ಹಲ್ಲೆ ನಡೆಸಿದ್ದಾರೆ.

ಪಿಎಸ್ಐ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ‌ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ. ಆರೋಪಿ ಹಾಗೂ ಕುಟುಂಬಸ್ಥರ‌ ವಿರುದ್ಧ ಹಲ್ಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಾಗಿದೆ.

ಓದಿ:ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ವಾಹನ ಚಲಾವಣೆ: ಸಾರ್ವಜನಿಕರಿಂದ ಚಾಲಕನಿಗೆ ಬಿತ್ತು ಗೂಸಾ

ABOUT THE AUTHOR

...view details