ಕರ್ನಾಟಕ

karnataka

ETV Bharat / state

ಮಳೆಯಿಂದ ಚಾಮರಾಜನಗರ ಅರಣ್ಯಗಳಲ್ಲಿ ಜೀವಕಳೆ: ಹಸಿರ ಸಿರಿ ಕಾಣಲು ಮಹಾಮಾರಿ ಅಡ್ಡಿ! - corona

ಕಾಡುಹಾದಿ, ಚಿಲಿಪಿಲಿಗುಟ್ಟುವ ಪಕ್ಷಿ, ಎತ್ತ ನೋಡಿದರತ್ತ ಹಚ್ಚ ಹಸಿರಿನ ಕಾಡು, ಸ್ವಚ್ಛಗಾಳಿಯ ಜೀವಕಳೆಯೇ ಚಾಮರಾಜನಗರದ‌ ಅರಣ್ಯ ಪ್ರದೇಶಗಳಲ್ಲಿ ಮೇಳೈಸಿದೆ. ಆದರೆ, ಕೊರೊನಾ ಲಾಕ್​ಡೌನ್​ನಿಂದ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿವೆ.

Green in the forest of Chamarajanaga
ಮಳೆಯಿಂದ ಚಾಮರಾಜನಗರ ಅರಣ್ಯಗಳಲ್ಲಿ ಜೀವಕ

By

Published : May 19, 2021, 7:11 PM IST

Updated : May 20, 2021, 11:48 AM IST

ಚಾಮರಾಜನಗರ: ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಬಿಆರ್​ಟಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆಮಹದೇಶ್ವರ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಹಸಿರು ಹೊದಿಕೆ ಹಾಸಿದಂತೆ ಕಾಡು ಕಾಣಿಸುತ್ತಿದೆ. ಆದರೆ, ಈ ಸೌಂದರ್ಯ ಕಣ್ತುಂಬಿಕೊಳ್ಳಲು ಕೊರೊನಾ‌ ಅಡ್ಡಿಯಾಗಿದೆ.

ಕಾಡಿನಲ್ಲಿ ಸತತ ಮಳೆಯಿಂದಾಗಿ ಹುಲ್ಲು ಬೆಳೆಯುತ್ತಿದ್ದು, ಗಿಡ - ಮರಗಳು ಚಿಗುರಿ ಹಸಿರ ಐಸಿರಿಯೇ ರೂಪುಗೊಂಡಿದೆ.‌ ಪ್ರವಾಸಿ ತಾಣ, ವನ್ಯಜೀವಿ ಸಫಾರಿಗಳಿಗೆ ನಿರ್ಬಂಧ ಇರುವುದರಿಂದ ಕಾಡಿನ‌ ಚೆಲುವು ಪ್ರಕೃತಿ ಪ್ರಿಯರಿಗೆ ದೂರದ ಬೆಟ್ಟವಾಗಿದೆ.

ಮಳೆಯಿಂದ ಚಾಮರಾಜನಗರ ಅರಣ್ಯಗಳಲ್ಲಿ ಜೀವಕಳೆ: ಹಸಿರ ಸಿರಿ ಕಾಣಲು ಮಹಾಮಾರಿ ಅಡ್ಡಿ!

ಕೊರೊನಾ ಕಾಲದಲ್ಲೂ ಕಿಡಿಗೇಡಿಗಳು ಹಾಕುವ ಬೆಂಕಿಯಿಂದ ಕಾಡು ರಕ್ಷಿಸಿದ್ದ ಕಾಡಿನ‌ ಯೋಧರು ಈಗ ನಿತ್ಯ ಹಸಿರ ಸಿರಿ‌ ಕಂಡು ಮುದಗೊಳ್ಳುತ್ತಿದ್ದಾರೆ.‌ ಸತತ ಮಳೆಯಿಂದಾಗಿ ಪ್ರಾಣಿಗಳು ಆಹಾರ, ನೀರು ಅರಸಿ ನಾಡಿನತ್ತ ಧಾವಿಸುವುದು ಸದ್ಯ ನಿಂತಿದೆ.

ಓದಿ:ಹಂಪಿಯ ಗೈಡ್​ಗಳಿಗೆ ಸುಧಾಮೂರ್ತಿ ಧನ ಸಹಾಯ: ತಲಾ 10 ಸಾವಿರ ರೂ. ನೆರವು

Last Updated : May 20, 2021, 11:48 AM IST

ABOUT THE AUTHOR

...view details