ಕರ್ನಾಟಕ

karnataka

ಮಲೆಮಹದೇಶ್ವರ, ಚಾಮರಾಜೇಶ್ವರ ದೇವಾಲಯಗಳಲ್ಲಿ ಅದ್ಧೂರಿ ಗೋ ಪೂಜೆ

By

Published : Nov 5, 2021, 8:50 PM IST

ಸರ್ಕಾರದ ನಿರ್ದೇಶನದಂತೆ ಇಂದು ಚಾಮರಾಜನಗರ ಜಿಲ್ಲೆಯ ಎಲ್ಲಾ ದೇಗುಲಗಳಲ್ಲಿ ಗೋ ಪೂಜೆ ನೆರವೇರಿಸಲಾಗಿದೆ.

Govardhan puja
ದೇವಾಲಯಗಳಲ್ಲಿ ಅದ್ಧೂರಿ ಗೋ ಪೂಜೆ

ಚಾಮರಾಜನಗರ: ಇದೇ ಮೊದಲ ಬಾರಿಗೆ ಸರ್ಕಾರದ ನಿರ್ದೇಶನದಂತೆ ಬಲಿಪಾಡ್ಯಮಿ ದಿನವಾದ ಇಂದು ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಅದ್ಧೂರಿಯಾಗಿ ಗೋ ಪೂಜೆ ನೆರವೇರಿಸಲಾಯಿತು.

ಚಾಮರಾಜನಗರ ಜಿಲ್ಲೆಯ ದೇಗುಲಗಳಲ್ಲಿ ನಡೆದ ಗೋ ಪೂಜೆ

ನಾಡಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ, ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ಸ್ವಾಮಿ ದೇಗುಲ, ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಸೇರಿದಂತೆ ಜಿಲ್ಲೆಯ ಮೊದಲನೆ ಮತ್ತು ಎರಡನೇ ದರ್ಜೆಯ ಮುಜರಾಯಿ ದೇವಾಲಯಗಳಲ್ಲಿ ಗೋಧೂಳಿ ಸಮಯದಲ್ಲಿ ಗೋ ಪೂಜೆ ನಡೆಯಿತು.

ಗೋವುಗಳನ್ನು ದೇವಸ್ಥಾನಕ್ಕೆ ಕರೆತಂದು ಸ್ನಾನ ಮಾಡಿಸಿ ದೇವಾಲಯದಲ್ಲಿ ಅರಿಶಿಣ, ಕುಂಕುಮ, ಹೂವುಗಳಿಂದ ಪೂಜಿಸಲಾಯಿತು. ಬಳಿಕ ಅಕ್ಕಿ, ಬೆಲ್ಲ, ಬಾಳೆಹಣ್ಣು ಮತ್ತು ಸಿಹಿ ತಿನಿಸುಗಳನ್ನು ಹಸುಗಳಿಗೆ ನೀಡಿ ದೇವಾಲಯಗಳ ಪಾರುಪತ್ತೆಗಾರರು, ಅರ್ಚಕರು ಆರಾಧಿಸಿದರು.

ಇದನ್ನೂ ಓದಿ: ದಾವಣಗೆರೆ: ರೀಲ್‌ ಅಲ್ಲ, ರಿಯಲ್‌ ಲಕ್ಷ್ಮಿಯನ್ನೇ ಪ್ರತಿಷ್ಠಾಪಿಸಿ ಪೂಜೆ

ABOUT THE AUTHOR

...view details