ಚಾಮರಾಜನಗರ:ಮೂರು ದಿನದಿಂದ ಗುಂಡ್ಲುಪೇಟೆ ಭಾಗದ ಜನರ ನಿದ್ರೆಗೆಡಿಸಿದ್ದ ತಮಿಳುನಾಡಿನ ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಕೊನೆಗೂ ತಮಿಳುನಾಡಿನ ಪುಂಡಾನೆ ಸೆರೆ: ನಿಟ್ಟುಸಿರು ಬಿಟ್ಟ ಜನತೆ! - ಚಾಮರಾಜನಗರ ಪುಂಡಾನೆ ಸೆರೆ
ಮೂರು ದಿನದಿಂದ ಗುಂಡ್ಲುಪೇಟೆ ಭಾಗದ ಜನರ ನಿದ್ರೆಗೆಡಿಸಿದ್ದ ತಮಿಳುನಾಡಿನ ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಪುಂಡಾನೆ ಸೆರೆ
ಗುಂಡ್ಲುಪೇಟೆ ತಾಲೂಕಿನ ಪಡಗೂರಿನ ಜಮೀನೊಂದರಲ್ಲಿ ಅರವಳಿಕೆ ನೀಡಿದ್ದು 6 ಸಾಕಾನೆಗಳ ಸಹಾಯದಿಂದ ಪುಂಡಾನೆಯನ್ನು ರವಾನಿಸುವ ಕೆಲಸ ಇನ್ನಷ್ಟೇ ಮಾಡಬೇಕಿದೆ. ಸಕ್ರೆಬೈಲು ಆನೆ ಶಿಬಿರಕ್ಕೆ ಈ ಪುಂಡಾನೆಯನ್ನು ಕಳುಹಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಪುಂಡಾನೆಯನ್ನು ಸೆರೆಹಿಡಿದು ಕೊನೆಗೆ ಕಾಡಿಗೇ ಬಿಟ್ಟ ತಮಿಳುನಾಡು ಅರಣ್ಯ ಇಲಾಖೆ ಕಾರ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.