ಕರ್ನಾಟಕ

karnataka

By

Published : Dec 3, 2021, 7:23 PM IST

Updated : Dec 4, 2021, 12:17 PM IST

ETV Bharat / state

ಚಾಮರಾಜನಗರದಲ್ಲಿ ಜ್ವರಕ್ಕೆ ವಿದ್ಯಾರ್ಥಿನಿ ಬಲಿ: ಕೊಳ್ಳೇಗಾಲದಲ್ಲಿ ಬಾಲಕಿಗೆ ಅಂಟಿದ ಕೊರೊನಾ

ರಾಮಸಮುದ್ರ ಬಡಾವಣೆಯಲ್ಲಿರುವ ಸಂತ ಪ್ರಾನ್ಸಿಸ್ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಜ್ವರದ ಕಾರಣಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.

fever girl dead  girl dead In chamarajnagara  ಚಾಮರಾಜನಗರದಲ್ಲಿ ಜ್ವರಕ್ಕೆ ವಿದ್ಯಾರ್ಥಿನಿ ಸಾವು  ಕೊಳ್ಳೇಗಾಲದಲ್ಲಿ ಬಾಲಕಿಗೆ ಕೊರೊನಾ
ಚಾಮರಾಜನಗರದಲ್ಲಿ ಜ್ವರಕ್ಕೆ ವಿದ್ಯಾರ್ಥಿನಿ ಬಲಿ

ಚಾಮರಾಜನಗರ: 4 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಜ್ವರದ ಕಾರಣಕ್ಕೆ ಬಲಿಯಾಗಿರುವ ಘಟನೆ ನಗರದಲ್ಲಿ ನಡೆದಿದ್ದು ಸದ್ಯ ಪಾಲಕರಲ್ಲಿ ಆತಂಕ ಮೂಡಿಸಿದೆ.

ರಾಮಸಮುದ್ರ ಬಡಾವಣೆಯಲ್ಲಿರುವ ಸಂತ ಪ್ರಾನ್ಸಿಸ್ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದು, ಈ ಬಗ್ಗೆ ಶಾಲಾ ಆಡಳಿತ ಮಂಡಳಿ ತುಟಿ ಬಿಚ್ಚುತ್ತಿಲ್ಲ, ಆರೋಗ್ಯ ಇಲಾಖೆ ತನಗೆ ಮಾಹಿತಿ ಇಲ್ಲ ಎಂದು ಜಾರಿಕೊಳ್ಳುತ್ತಿದೆ. ಸದ್ಯ, ಶಾಲೆಗೆ ರಜೆ ಘೋಷಣೆ ಮಾಡಲಾಗಿದ್ದು, ತೀವ್ರ ಜ್ವರದಿಂದ ಬಾಲಕಿ ಬಳಲುತ್ತಿದ್ದಳು ಎನ್ನಲಾಗಿದೆ.

ಈ ಸಂಬಂಧ, ತಾಲೂಕು ವೈದ್ಯಾಧಿಕಾರಿ ಶ್ರೀನಿವಾಸ್ ಈಟಿವಿ ಭಾರತದೊಂದಿಗೆ ಮಾತನಾಡಿ, ವೈದ್ಯರನ್ನು ಕಳುಹಿಸಲಾಗಿದೆ, ಇನ್ನು ಮಾಹಿತಿ ಸಿಕ್ಕಿಲ್ಲ ಎಂದರು. ಡಿಎಚ್ಇ ಡಾ.ವಿಶ್ವೇಶ್ವರಯ್ಯ ಕೂಡ ಮಾಹಿತಿ ಕಲೆ ಹಾಕಲಾಗುತ್ತಿದ್ದೇವೆ ಎಂದಿದ್ದಾರೆ, ಶಾಲಾ ಆಡಳಿತ ಮಂಡಲಳಿ ಯಾರೊಬ್ಬರು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ.

ಮೂರನೇ ಕ್ಲಾಸ್ ವಿದ್ಯಾರ್ಥಿನಿಗೆ ಕೊರೊನಾ:ನಿತ್ಯ ಒಂದಿಲ್ಲೊಂದು ಶಾಲೆಯಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದು, ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಶಾಲೆಯ 3 ನೇ ತರಗತಿ ವಿದ್ಯಾರ್ಥಿನಿಗೆ ಕೊರೊನಾ ಕಾಣಿಸಿಕೊಂಡಿದೆ. ಸದ್ಯ, ಶಾಲೆಗೆ ರಜೆ ಘೋಷಿಸಿ ತರಗತಿಯ 29 ಮಂದಿಯ ಸ್ವ್ಯಾಬ್ ಟೆಸ್ಟ್ ನಡೆಸಲಾಗಿದೆ.

Last Updated : Dec 4, 2021, 12:17 PM IST

ABOUT THE AUTHOR

...view details