ಕರ್ನಾಟಕ

karnataka

By

Published : Sep 26, 2020, 3:49 PM IST

ETV Bharat / state

ಕೆಟ್ಟ ಹಂದಿಗಳ ವಿರುದ್ಧ ಬಂದ್ ಮಾಡುತ್ತಿದ್ದೇವೆ.. ರೈತ ಮುಖಂಡ ಡಾ.ಗುರುಪ್ರಸಾದ್

ಹಸಿರು ಶಾಲು ಹೊದ್ದು ರೈತಪರ ಎಂದು ಕರೆಯಿಸಿಕೊಳ್ಳುವ ಸಿಎಂ ಯಡಿಯೂರಪ್ಪ ಅವರನ್ನು ರಾಜಾಹುಲಿ ಎನ್ನುತ್ತಿದ್ದಾರೆ. ಆದರೆ, ಅವರು ರಾಜಾಹುಲಿಯಲ್ಲ. ಹೈಕಮಾಂಡ್ ಕೀ ಕೊಟ್ಟರೆ ಕುಣಿಯುವ ಬೊಂಬೆ ಹುಲಿ. ಇಂತಹ ಬೊಂಬೆ ಹುಲಿಗಳಿಂದ ರೈತರ ಉದ್ಧಾರ ಸಾಧ್ಯವಿಲ್ಲ..

Farmer leader Dr. Guruprasad Statement about Karnataka band
ಕೆಟ್ಟ ಹಂದಿಗಳ ವಿರುದ್ಧ ಬಂದ್ ಮಾಡುತ್ತಿದ್ದೇವೆ: ರೈತ ಮುಖಂಡ ಡಾ.ಗುರುಪ್ರಸಾದ್

ಚಾಮರಾಜನಗರ: ಎಲ್ಲಾ ರಾಜಕಾರಣಿಗಳಿಗೂ ದುಡ್ಡು ಮಾಡುವುದೇ ಮುಖ್ಯ ಹೊರತು ಜನರ ಉದ್ಧಾರವಲ್ಲ.‌ ಇಂತಹ ಕೆಟ್ಟ ಹಂದಿಗಳ ವಿರುದ್ಧ ಚಳವಳಿ ಮಾಡುತ್ತಿದ್ದೇವೆ ಎಂದು ರೈತ ಮುಖಂಡ ಡಾ.ಗುರುಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಟ್ಟ ಹಂದಿಗಳ ವಿರುದ್ಧ ಬಂದ್ ಮಾಡುತ್ತಿದ್ದೇವೆ..

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಅಸ್ತಿತ್ವ ಕಿತ್ತು ಹಾಕುತ್ತಿರುವುದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ರೈತ ಸಂಘಟನೆ ಕಾಂಗ್ರೆಸ್ ಹೇಳಿದಂತೆ ಕೇಳುತ್ತಿದೆ ಎಂದು ಮೋದಿಯ ಗುಲಾಮರು ಬಿಂಬಿಸುತ್ತಿದ್ದಾರೆ.‌ ಇದು ಸುಳ್ಳು. ಎಲ್ಲಾ ರಾಜಕಾರಣಿಗಳು ಕೆಟ್ಟ ಹಂದಿಗಳು. ಅವರಿಗೆ ದುಡ್ಡು ಮಾಡುವುದೇ ಮುಖ್ಯ ಹೊರತು ಜನರ ಉದ್ಧಾರವಲ್ಲ.‌ ಇಂತಹ ಕೆಟ್ಟ ಹಂದಿಗಳ ವಿರುದ್ಧ ಚಳವಳಿ ಮಾಡುತ್ತಿದ್ದೇವೆ.

ಹಸಿರು ಶಾಲು ಹೊದ್ದು ರೈತಪರ ಎಂದು ಕರೆಯಿಸಿಕೊಳ್ಳುವ ಸಿಎಂ ಯಡಿಯೂರಪ್ಪ ಅವರನ್ನು ರಾಜಾಹುಲಿ ಎನ್ನುತ್ತಿದ್ದಾರೆ. ಆದರೆ, ಅವರು ರಾಜಾಹುಲಿಯಲ್ಲ. ಹೈಕಮಾಂಡ್ ಕೀ ಕೊಟ್ಟರೆ ಕುಣಿಯುವ ಬೊಂಬೆ ಹುಲಿ. ಇಂತಹ ಬೊಂಬೆ ಹುಲಿಗಳಿಂದ ರೈತರ ಉದ್ಧಾರ ಸಾಧ್ಯವಿಲ್ಲ. ಕೆಟ್ಟ ಹಂದಿಗಳ ವಿರುದ್ಧ ನಾವು ಬಂದ್ ಮಾಡುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕೆಂದರು.

ಗಡಿ ಜಿಲ್ಲೆ ಸ್ತಬ್ಧ :ಸೋಮವಾರ ರೈತ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್​ಗೆ ದಲಿತ ಸಂಘಟನೆಗಳು, ಪ್ರಗತಿಪರರು, ಎಪಿಎಂಸಿ ವರ್ತಕರು, ಲಾರಿ ಮಾಲೀಕರು, ಚಾಲಕರು, ಕನ್ನಡ ಸಂಘಟನೆಗಳು ಹಾಗೂ ಎಸ್​ಡಿಪಿಐ ಬೆಳಗ್ಗೆ 6ರಿಂದಲೇ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟಿಸಲು ಮುಂದಾಗಿವೆ.

ABOUT THE AUTHOR

...view details