ಕೊಳ್ಳೇಗಾಲ:ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೋರ್ವ ದಾಸನಪುರ ಸೇತುವೆ ಮೇಲಿಂದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೌಟುಂಬಿಕ ಕಲಹ: ನದಿಗೆ ಹಾರಿ ಪ್ರಾಣ ಬಿಟ್ಟ ವ್ಯಕ್ತಿ - ಕೌಟುಂಬಿಕ ಕಲಹ
ಪಟ್ಟಣದ ನಾಯಕರ ಚಿಕ್ಕಬೀದಿಯ ನಿವಾಸಿ ಶಾಂತು (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕೌಟುಂಬಿಕ ಕಲಹದಿಂದ ಬೇಸತ್ತು ಮಂಗಳವಾರ ಸಂಜೆ ಇಲ್ಲಿನ ದಾಸನಪುರ ಸೇತುವೆ ಮೇಲಿಂದ ಕಾವೇರಿ ನದಿಗೆ ಹಾರಿದ್ದಾನೆ ಎನ್ನಲಾಗಿದೆ.
![ಕೌಟುಂಬಿಕ ಕಲಹ: ನದಿಗೆ ಹಾರಿ ಪ್ರಾಣ ಬಿಟ್ಟ ವ್ಯಕ್ತಿ family-strife-a-man-who-jumped-into-a-river-and-died](https://etvbharatimages.akamaized.net/etvbharat/prod-images/768-512-10664314-thumbnail-3x2-sdgff.jpg)
ಆತ್ಮಹತ್ಯೆ
ಪಟ್ಟಣದ ನಾಯಕರ ಚಿಕ್ಕಬೀದಿಯ ನಿವಾಸಿ ಶಾಂತು (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕೌಟುಂಬಿಕ ಕಲಹದಿಂದ ಬೇಸತ್ತು ಮಂಗಳವಾರ ಸಂಜೆ ಇಲ್ಲಿನ ದಾಸನಪುರ ಸೇತುವೆ ಮೇಲಿಂದ ಕಾವೇರಿ ನದಿಗೆ ಹಾರಿದ್ದಾನೆ ಎನ್ನಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ನಂತರ ಮೃತದೇಹಕ್ಕಾಗಿ ಶೋಧ ಮಾಡಿದಾಗ ತಡವಾಗಿ ಸಿಕ್ಕಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.