ಕರ್ನಾಟಕ

karnataka

ನೀರಿನ ಪೈಪ್​ನಲ್ಲಿ ಸ್ಫೋಟಕಗಳು ಪತ್ತೆ.. ಅಕ್ರಮ ಗಣಿಗಾರಿಕೆ ಉದ್ದೇಶ ಶಂಕೆ..!

By

Published : Nov 18, 2021, 9:03 AM IST

ಹಳ್ಳವೊಂದರ ನೀರಿನ ಪೈಪ್​ನಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು, ಅಕ್ರಮ ಗಣಿಗಾರಿಕೆ ನಡೆಸುವ ಸಲುವಾಗಿ ಸಂಗ್ರಹಣೆ ಮಾಡಿರಬಹುದೆಂದು ಚಾಮರಾಜನಗರ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Explosive Detection, Explosive Detection in ditch water pipe, Explosive Detection in ditch water pipe at Chamarajanagar, Chamarajanagar crime news, ಸ್ಫೋಟಕಗಳು ಪತ್ತೆ, ಹಳ್ಳದ ನೀರಿನ ಪೈಪಲ್ಲಿ ಸ್ಫೋಟಕಗಳು ಪತ್ತೆ, ಚಾಮರಾಜನಗರದ ಹಳ್ಳದ ನೀರಿನ ಪೈಪಲ್ಲಿ ಸ್ಫೋಟಕಗಳು ಪತ್ತೆ, ಚಾಮರಾಜನಗರ ಅಪರಾಧ ಸುದ್ದಿ,
ಹಳ್ಳವೊಂದರ ನೀರಿನ ಪೈಪಲ್ಲಿ ಸ್ಫೋಟಕಗಳು ಪತ್ತೆ

ಚಾಮರಾಜನಗರ: ಹಳ್ಳವೊಂದರ ಪೈಪ್​ನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸ್ಫೋಟಕ ವಸ್ತುಗಳು ಪತ್ತೆಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ವಿ‌.ಸಿ.ಹೊಸೂರು ಗ್ರಾಮದ ಸಮೀಪ ನಡೆದಿದೆ‌. ಅಕ್ರಮ ಗಣಿಗಾರಿಕೆ ನಡೆಸುವವರು ಇಲ್ಲವೇ ಬೇಟೆಯಾಡುವವರು ಈ ಸ್ಫೋಟಕ ವಸ್ತುಗಳನ್ನು ಅಡಗಿಸಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಸದ್ಯ 120 ಜಿಲಿಟಿನ್​ ಕಡ್ಡಿಗಳನ್ನು ವಶಪಡಿಸಿಕೊಂಡು ಭದ್ರವಾಗಿಡಲಾಗಿದೆ.

ಹಳ್ಳವೊಂದರ ನೀರಿನ ಪೈಪಲ್ಲಿ ಸ್ಫೋಟಕಗಳು ಪತ್ತೆ

ತಮಿಳುನಾಡಿನ ತಿರುಚಿ ಜಿಲ್ಲೆಯಲ್ಲಿ ತಯಾರಿಸಿರುವ ಸ್ಫೋಟಕ‌ ಇದಾಗಿದ್ದು, ಅಕ್ರಮವಾಗಿ ಗಣಿಗಾರಿಕೆ ನಡೆಸಲು ಇಲ್ಲವೇ ಅಂತಹವರಿಗೆ ಮಾರಾಟ ಮಾಡಲು ತಂದಿಟ್ಟರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details