ಕರ್ನಾಟಕ

karnataka

ಚಾಮರಾಜನಗರ ಬಳಿ ಅನುಮಾನಾಸ್ಪದವಾಗಿ ಅಸುನೀಗಿದ ಗಜರಾಜ!

By

Published : Jan 10, 2020, 10:46 AM IST

ಅನುಮಾನಾಸ್ಪದವಾಗಿ ದೊಡ್ಡ ದಂತದ ಆನೆಯೊಂದು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಕುಳ್ಳೂರು (ಬೂದಿಪಡಗ ರಂಗಸಂದ್ರ)ದಲ್ಲಿ ನಡೆದಿದೆ.

Elephant died in Chamarajanagara
ಅನುಮಾನಾಸ್ಪದವಾಗಿ ಅಸುನೀಗಿದ ದೊಡ್ಡ ದಂತದ ಗಜರಾಜ!

ಚಾಮರಾಜನಗರ:ಅನುಮಾನಾಸ್ಪದವಾಗಿ ದೊಡ್ಡ ದಂತದ ಆನೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಕುಳ್ಳೂರು (ಬೂದಿಪಡಗ ರಂಗಸಂದ್ರ)ದಲ್ಲಿ ನಡೆದಿದೆ.

ಅನುಮಾನಾಸ್ಪದವಾಗಿ ಅಸುನೀಗಿದ ದೊಡ್ಡ ದಂತದ ಗಜರಾಜ!

ಗ್ರಾಮದ ಶಿವರುದ್ರ ಎಂಬುವರ ಜಮೀನಿನಲ್ಲಿ ಆನೆ ಮೃತದೇಹ ಪತ್ತೆಯಾಗಿದ್ದು, 40-45 ವರ್ಷವಾಗಿದೆ ಎಂದು ಅಂದಾಜಿಸಲಾಗಿದೆ. ಮೂಲಗಳ ಪ್ರಕಾರ, ಜಮೀನಿನ ಬೆಳೆ ರಕ್ಷಣೆಗೆ ಹಾಯಿಸಿದ್ದ ವಿದ್ಯುತ್ ಪ್ರವಹಿಸಿ ಗಜರಾಜ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಆನೆಗೆ ಉದ್ದದ ದಂತಗಳಿದ್ದು ನೋಡಲು ಬಹಳ ಆಕರ್ಷಕವಾಗಿರುವುದರಿಂದ ಜನರು ಮರುಕಪಡುತ್ತಿದ್ದಾರೆ. ಇನ್ನು, ಸ್ಥಳಕ್ಕೆ ಬಿಆರ್​ಟಿ ಡಿಎಫ್ಒ, ಪುಣಜನೂರು ಆರ್​ಎಫ್ಒ ದೌಡಾಯಿಸಿದ್ದು, ಆನೆಯ ಮರಣೋತ್ತರ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ.

ABOUT THE AUTHOR

...view details