ಚಾಮರಾಜನಗರ: ದಾರಿತಪ್ಪಿ ಬಂದು ಗ್ರಾಮದ ಜಮೀನೊಂದರಲ್ಲಿ ಒಂಟಿ ಸಲಗ ಬೀಡುಬಿಟ್ಟಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಕೊಡಗಾಪುರದಲ್ಲಿ ಕಂಡುಬಂದಿದೆ.
ದಾರಿ ತಪ್ಪಿ ಬಂದ ಒಂಟಿಸಲಗ... ಮತ್ತೆ ಕಾಡಿಗಟ್ಟಲು ಕಾರ್ಯಾಚರಣೆ
ಕಾಡಾನೆ ದಾರಿ ತಪ್ಪಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಕೊಡಗಾಪುರದಲ್ಲಿ ಬೀಡುಬಿಟ್ಟಿದೆ.
ಕೊಡಗಾಪುರದಲ್ಲಿ ಬೀಡುಬಿಟ್ಟ ಒಂಟಿ ಸಲಗ
ಭಾನುವಾರ ರಾತ್ರಿಯೇ ಬೇಗೂರು ಭಾಗದ ತಗ್ಗಲೂರು-ರಾಘವಾಪುರ ಹೆದ್ದಾರಿ ದಾಟಿ ಸೀಗೆವಾಡಿ ಗ್ರಾಮದತ್ತ ಆನೆ ಬಂದಿರುವ ಸಾಧ್ಯತೆಯಿದ್ದು, ಬೆಳಗ್ಗೆಯಾದ ಕಾರಣ ಸೀಗೆವಾಡಿ- ಕೊಡಗಾಪುರದಲ್ಲಿ ಬೀಡುಬಿಟ್ಟಿದೆ.
ಜನರ ಕಿರುಚಾಟ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಂಡಿದ್ದಾರೆ.