ಕರ್ನಾಟಕ

karnataka

ETV Bharat / state

ದಾರಿ ತಪ್ಪಿ ಬಂದ ಒಂಟಿಸಲಗ... ಮತ್ತೆ ಕಾಡಿಗಟ್ಟಲು ಕಾರ್ಯಾಚರಣೆ

ಕಾಡಾನೆ ದಾರಿ ತಪ್ಪಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಕೊಡಗಾಪುರದಲ್ಲಿ ಬೀಡುಬಿಟ್ಟಿದೆ.

By

Published : Oct 1, 2019, 5:45 AM IST

ಕೊಡಗಾಪುರದಲ್ಲಿ ಬೀಡುಬಿಟ್ಟ ಒಂಟಿ ಸಲಗ

ಚಾಮರಾಜನಗರ: ದಾರಿತಪ್ಪಿ ಬಂದು ಗ್ರಾಮದ ಜಮೀನೊಂದರಲ್ಲಿ ಒಂಟಿ ಸಲಗ ಬೀಡುಬಿಟ್ಟಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಕೊಡಗಾಪುರದಲ್ಲಿ ಕಂಡುಬಂದಿದೆ.

ಕೊಡಗಾಪುರದಲ್ಲಿ ಬೀಡುಬಿಟ್ಟ ಒಂಟಿ ಸಲಗ

ಭಾನುವಾರ ರಾತ್ರಿಯೇ ಬೇಗೂರು ಭಾಗದ ತಗ್ಗಲೂರು-ರಾಘವಾಪುರ ಹೆದ್ದಾರಿ ದಾಟಿ ಸೀಗೆವಾಡಿ ಗ್ರಾಮದತ್ತ ಆನೆ ಬಂದಿರುವ ಸಾಧ್ಯತೆಯಿದ್ದು, ಬೆಳಗ್ಗೆಯಾದ ಕಾರಣ ಸೀಗೆವಾಡಿ- ಕೊಡಗಾಪುರದಲ್ಲಿ ಬೀಡುಬಿಟ್ಟಿದೆ.

ಜನರ ಕಿರುಚಾಟ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಂಡಿದ್ದಾರೆ.

ABOUT THE AUTHOR

...view details