ಕರ್ನಾಟಕ

karnataka

By

Published : May 10, 2021, 9:39 AM IST

Updated : May 10, 2021, 9:58 AM IST

ETV Bharat / state

ಚಾಮರಾಜನಗರದಲ್ಲಿ ಲಾಕ್​​ಡೌನ್​ಗೆ ಡೋಂಟ್​ ಕೇರ್​: ಖಾಸಗಿ ಕ್ಲಿನಿಕ್​ ಮುಂದೆ ಟೋಕನ್​ಗೆ ಕಿತ್ತಾಟ

ಲಾಕ್​​ಡೌನ್​ ನಡುವೆಯೂ 100ಕ್ಕೂ ಹೆಚ್ಚು ಮಂದಿ ಖಾಸಗಿ ಕ್ಲಿನಿಕ್ ಮುಂದೆ ಜಮಾಯಿಸಿ ಟೋಕನ್​ಗೆ ಕಿತ್ತಾಟ ನಡೆಸಿ, ಒಬ್ಬರ ಮೇಲೊಬ್ಬರು ಮುಗಿಬಿದ್ದ ಘಟನೆ ಇಂದು ಬೆಳಗ್ಗೆ 9ರ ಸುಮಾರಿಗೆ ನಗರದಲ್ಲಿ ನಡೆಯಿತು‌.

ಎಸ್ಪಿ ಎಚ್ಚರಿಕೆ ಗಾಳಿಗೆ ತೂರಿದ ಜನ
ಎಸ್ಪಿ ಎಚ್ಚರಿಕೆ ಗಾಳಿಗೆ ತೂರಿದ ಜನ

ಚಾಮರಾಜನಗರ: ವಾಹನ ತಂದರೆ ಜಪ್ತಿ ಎಂಬ ಎಚ್ಚರಿಕೆ ನೀಡಿದ್ದ ಚಾಮರಾಜನಗರ ಎಸ್ಪಿ ಅವರ ಮಾತನ್ನು ಜನರು ಗಾಳಿಗೆ ತೂರಿದ್ದು, ಜಾತ್ರೆಗೆ ತೆರಳಿದಂತೆ ವಾಹನ ಸಂಚಾರ ಬೆಳಗ್ಗೆ 8.30 ಆದರೂ ಕಂಡುಬಂದಿದೆ. ಎಂದಿನಂತೆ ದಿನನಿತ್ಯದ ಚಟುವಟಿಕೆ ನಡೆಯುತ್ತಿದ್ದು, ಜನರು ಕೊರೊನಾ ಭಯ ಮರೆತು ವ್ಯವಹಾರ ನಡೆಸುತ್ತಿದ್ದಾರೆ. ಮೊದಲ ದಿನದ ಲಾಕ್​​ಡೌನ್​​ಗೆ ವಾಹನ ರಸ್ತೆಗೆ ಇಳಿಸಬೇಡಿ ಎಂಬ ಎಚ್ಚರಿಕೆ ಮಾತನ್ನು ಜನರು ತಲೆಗೆ ಹಾಕಿಕೊಂಡಂತೆ ಕಾಣಿಸುತ್ತಿಲ್ಲ.

ಎಸ್ಪಿ ಎಚ್ಚರಿಕೆ ಗಾಳಿಗೆ ತೂರಿದ ಜನ

ಖಾಸಗಿ ಕ್ಲಿನಿಕ್ ಮುಂದೆ ಟೋಕನ್​​ಗೆ ಕಿತ್ತಾಟ:

ಭುವನೇಶ್ವರಿ ವೃತ್ತದ ಸಮೀಪವಿರುವ ಶ್ವೇತಾದ್ರಿ ಕ್ಲಿನಿಕ್​​ಗೆ ಬಂದಿದ್ದ ಸುತ್ತಮುತ್ತಲಿನ ಗ್ರಾಮದ 100ಕ್ಕೂ ಹೆಚ್ಚು ರೋಗಿಗಳ ಸಂಬಂಧಿಗಳು ಟೋಕನ್​​ಗೆ ಮುಗಿಬಿದ್ದರು‌.‌‌ ಸರ್ಕಾರಿ ಚಿಕಿತ್ಸೆಗೂ ಮುನ್ನ ಕೊರೊನಾ ಟೆಸ್ಟ್‌ ಕಡ್ಡಾಯಗೊಳಿಸಿರುವುದರಿಂದ ಖಾಸಗಿ ಕ್ಲಿನಿಕ್​​ಗಳತ್ತ ಜನರು ಮುಖ ಮಾಡಿದ್ದು ಜನಜಾತ್ರೆಯೇ ಸೇರುತ್ತಿದೆ. ರೋಗಿಗಳ ಸಂಬಂಧಿಕರ ಕಿತ್ತಾಟ ಗಮನಿಸಿದ ಪೊಲೀಸರು ಮತ್ತು ಸುರಕ್ಷಾ ಪಡೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಸರದಿ ಸಾಲಿನಲ್ಲಿ ಟೋಕನ್ ತೆಗೆದುಕೊಳ್ಳಲು ವ್ಯವಸ್ಥೆ ಮಾಡಿದರು‌. ಇನ್ನು, ಹತ್ತಾರು ಮಂದಿ ಟೋಕನ್ ಸಿಗದೇ ಸ್ಥಳದಲ್ಲೇ ಕಾದು ಕುಳಿತಿದ್ದಾರೆ.

ಓದಿ : ಲಾಕ್​ಡೌನ್ ಹಿನ್ನೆಲೆ ಇಡೀ ದಿನ ಕೋವಿಡ್ ನಿಯಂತ್ರಣ ಸಂಬಂಧಿತ ಸರಣಿ ಸಭೆಯಲ್ಲಿ ಸಿಎಂ ಬ್ಯುಸಿ

Last Updated : May 10, 2021, 9:58 AM IST

ABOUT THE AUTHOR

...view details