ಕರ್ನಾಟಕ

karnataka

By

Published : Aug 25, 2020, 10:52 AM IST

ETV Bharat / state

ಗುಂಡ್ಲುಪೇಟೆ: ಚಿರತೆ ದಾಳಿಗೆ ಹಸು ಸಾವು

ಗುಂಡ್ಲುಪೇಟೆ ತಾಲೂಕಿನಲ್ಲಿ ನಾಲ್ಕೈದು ತಿಂಗಳಿನಿಂದ ಹುಲಿ ಚಿರತೆ ಕಾಟ ಇರಲಿಲ್ಲ. ಈಗ ಚಿರತೆ ದಾಳಿಗೆ ಹಸು ಮೃತಪಟ್ಟಿರುವುದು ರೈತರು ಬೆಚ್ಚಿ ಬಿದ್ದಿದ್ದಾರೆ.

dsd
ಚಿರತೆ ದಾಳಿಗೆ ಹಸು ಸಾವು

ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮದಲ್ಲಿನ ರಾಜಪ್ಪ ಎಂಬುವವರ ಜಮೀನಿನ ಕೊಟ್ಟಿಗೆಯಲ್ಲಿದ್ದ ಹಸು ಚಿರತೆ ಕೊಂದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಿರತೆ ದಾಳಿಗೆ ಹಸು ಸಾವು

ಮಾಲೀಕರು ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಗ್ರಾಮದಲ್ಲಿ ಇರುವ ಮನೆಯಲ್ಲಿ ಇದ್ದರು. ಈ ವೇಳೆ ಈ ಘಟನೆ ನಡೆದಿದೆ. ಜಮೀನಿನಲ್ಲಿ ಚಿರತೆ ಹೆಜ್ಜೆ ಗುರುತು ಸಹ ಕಂಡು ಬಂದಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಚಿರತೆ ದಾಳಿಯಿಂದ ಮೃತಪಟ್ಟಿದೆ ಎಂದು ತಿಳಿಸಿ ಮಹಜರು ಮಾಡಿ ಹಸುವನ್ನು ಹೂತಿದ್ದಾರೆ.

ABOUT THE AUTHOR

...view details