ಕರ್ನಾಟಕ

karnataka

ETV Bharat / state

ಚಾಮರಾಜನಗರ: ಸೋಂಕಿತ ಆತ್ಮಹತ್ಯೆ, ಅಪ್ಪ-ಮಗನನ್ನು ಬಲಿ ಪಡೆದ ಕೊರೊನಾ! - ಕೊರೊನಾದಿಂದ ಅಪ್ಪ ಮಗ ಸಾವು

ಚಾಮರಾಜನಗರದಲ್ಲಿ ಸೋಂಕಿತ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಿಲ್ಲೆಯಲ್ಲಿ ನಡೆದ ಮತ್ತೊಂದು ದುರಂತ ಘಟನೆಯಲ್ಲಿ ಕೊರೊನಾ ಸೋಂಕು ತಗುಲಿದ್ದ ಅಪ್ಪ-ಮಗ ಇಬ್ಬರೂ ಸಾವನ್ನಪ್ಪಿದ್ದಾರೆ.

death
death

By

Published : May 9, 2021, 9:26 PM IST

ಚಾಮರಾಜನಗರ: ನಾಪತ್ತೆಯಾಗಿದ್ದ ಸೋಂಕಿತನೋರ್ವನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಕುಂಭೇಶ್ವರ ಕಾಲೋನಿಯಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ 45 ವರ್ಷದ ಸೋಂಕಿತ ಮೃತಪಟ್ಟಿರುವ ದುರ್ದೈವಿ. ಕಳೆದ 6ರಂದು ಇವರಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಮನೆಯ ಮೂವರು ಸದಸ್ಯರು ಸೋಂಕಿತರಾಗಿದ್ದರು.‌ ಇದಾದ ಒಂದು ದಿನಕ್ಕೆ ನಾಪತ್ತೆಯಾಗಿದ್ದ ಇವರು ಇಂದು ಕುಂಭೇಶ್ವರ ಕಾಲೋನಿಯ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಮಹಾಮಾರಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಚಾಮರಾಜನಗರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ಇನ್ನೂ ದಾಖಲಾಗಿಲ್ಲ.

ತಂದೆ- ಮಗ ಸಾವು:

ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ತಂದೆ-ಮಗ ಮೃತಪಟ್ಟ ಘಟನೆ ಒಂದು ದಿನದ ಅಂತದಲ್ಲಿ ನಡೆದಿದೆ. ಗ್ರಾಮದ 69 ವರ್ಷದ ಸೋಂಕಿತರೊಬ್ಬರು ಹೋಂ ಐಸೋಲೇಷನ್​​ನಲ್ಲಿದ್ದು ಶುಕ್ರವಾರ ಮೃತಪಟ್ಟಿದ್ದರು. ಇವರ ಮಗ 49 ವರ್ಷದವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದು, ಇಂದು ಅಂತ್ಯಕ್ರಿಯೆ ನಡೆದಿದೆ‌. ಇನ್ನೋರ್ವ ಮಗನ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details