ಕರ್ನಾಟಕ

karnataka

ETV Bharat / state

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ..ಕೊರೊನಾ ಸೋಂಕಿತ ನಾಪತ್ತೆ, ಕುಟುಂಬ ಕಂಗಾಲು - Coronavirus infected person missing from hospital in chamarajanagar

ಒಂದು ವಾರದ ಹಿಂದೆ ಕೊರೊನಾ ದೃಢಪಟ್ಟು ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.

coronavirus-infected-person-missing-from-hospital-in-chamarajanagar
ನಾಪತ್ತೆಯಾದ ವ್ಯಕ್ತಿಯ ಕುಟುಂಬಸ್ಥರು

By

Published : May 3, 2021, 8:30 PM IST

ಚಾಮರಾಜನಗರ: ಆಮ್ಲಜನಕ ದುರಂತ ಕರಿಛಾಯೆಯಲ್ಲಿ ಮುಳುಗಿರುವ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು, ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.

ತಾಲೂಕಿನ ಸಂತೇಮರಹಳ್ಳಿ ಸಮೀಪದ ಆಲ್ದೂರು ಗ್ರಾಮದ 52 ವರ್ಷದ ಸೋಂಕಿತರೊಬ್ಬರು ನಾಪತ್ತೆಯಾಗಿದ್ದಾರೆ. ಆದರೆ, ಚೆನ್ನಾಗಿದ್ದಾರೆ ಎನ್ನುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಈಗ ರೋಗಿಯೇ ಇಲ್ಲ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂಬ ಹಾರಿಕೆ ಉತ್ತರ ಕೊಟ್ಟಿರುವುದಾಗಿ ಪುತ್ರ ನಾಗೇಂದ್ರ ಅಳಲು ತೋಡಿಕೊಂಡಿದ್ದಾರೆ.

ಕಳೆದ ಒಂದು ವಾರದ ಹಿಂದೆ ಕೊರೊನಾ ದೃಢಪಟ್ಟಿತ್ತು. ನಾಲ್ಕು ದಿನಗಳ ಹಿಂದೆ ಹೋಂ ಐಸೋಲೇಷನ್​ನಲ್ಲಿದ್ದ ವ್ಯಕ್ತಿಗೆ ಉಸಿರಾಟದ ಸಮಸ್ಯೆಯಾಗಿದ್ದರಿಂದ ಸಂತೇಮರಹಳ್ಳಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲೂ ಕೂಡ ಆಮ್ಲಜನಕ ಕೊರತೆಯಾಗಿದ್ದರಿಂದ ಚಾಮರಾಜನಗರ ಕೋವಿಡ್ ಆಸ್ಪತ್ರೆಗೆ ಭಾನುವಾರ ದಾಖಲಾಗಿದ್ದರು.

ಕಾಣೆಯಾದ ವ್ಯಕ್ತಿಯ ಮಗ ನಾಗೇಂದ್ರ ಮಾತನಾಡಿದರು

ಇಂದು ಬೆಳಗ್ಗೆ 7.30ಕ್ಕೂ ಫೋನ್ ಮಾಡಿ ಮಾತನಾಡಿದ್ದೆ. ಆದರೆ, 12 ಗಂಟೆಗೆ ಫೋನ್ ಸ್ವಿಚ್ಡ್ ಆಫ್ ಆಗಿದ್ದರಿಂದ ಸಿಬ್ಬಂದಿಯನ್ನು ವಿಚಾರಿಸಿದೆ. ಆಗ ಅವರು, ಚೆನ್ನಾಗಿದ್ದಾರೆ ಎಂದರು. ಸಂಜೆ ಕೇಳಿದಾಗ ರೋಗಿಯೇ ಇಲ್ಲ ಎನ್ನುತ್ತಿದ್ದಾರೆ ಎಂದು ಅವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕಿ ತಂದೆ ನೆನೆದು ಕಣ್ಣೀರಾದರು.

ಈಗ ಕುಟುಂಬಕ್ಕೆ ದಿಕ್ಕು ತೋಚದ ಸ್ಥಿತಿ ನಿರ್ಮಾಣವಾಗಿದ್ದು, ಕುಟುಂಬದ ಸದಸ್ಯನನ್ನು ಕಾಣದೆ ಕಂಗಾಲಾಗಿದ್ದಾರೆ.‌ ಉಸಿರಾಟ ತೊಂದರೆಯಿದ್ದ ವ್ಯಕ್ತಿ ಎತ್ತ ಹೋದರು? ಹೇಗೆ ಹೋದರು? ಎಂಬುದು ಕುಟುಂಬದವರಿಗೆ ಯಕ್ಷ ಪ್ರಶ್ನೆಯಾಗಿದೆ.

ಓದಿ:ಆಕ್ಸಿಜನ್ ಪೂರೈಕೆಯಲ್ಲಿ ಸಮಸ್ಯೆ ಆದರೆ ಅಧಿಕಾರಿಗಳನ್ನ ಸಂಪರ್ಕಿಸಿ ; ಸಿಎಂ ಸೂಚನೆ

ABOUT THE AUTHOR

...view details