ಚಾಮರಾಜನಗರ: ತೆಲಂಗಾಣದಲ್ಲಿ ಎನ್ ಕೌಂಟರ್ ಮಾಡಿದಂತೆ ನಿಮ್ಮನ್ನು ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದ್ ಕುಮಾರ್ ಬೈಕ್ ಕಳ್ಳರಿಗೆ ಚಳಿ ಬಿಡಿಸಿದರು.
ತೆಲಂಗಾಣ ಎನ್ಕೌಂಟರ್ ರೀತಿ ನಿಮ್ಮನ್ನೂ ಮಾಡ್ಬೇಕು: ಬೈಕ್ ಕಳ್ಳರಿಗೆ ಎಸ್ಪಿ ಆನಂದ್ ಕುಮಾರ್ ತಪರಾಕಿ! - ಚಾಮರಾಜನಗರ ಬೈಕ್ ಕಳ್ಳರು
ಶೋಕಿಗಾಗಿ ಬೈಕ್ ಕದ್ದ ಖದೀಮರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಎಸ್ಪಿ ಆನಂದ್ ಕುಮಾರ್ ಕಳ್ಳರ ಹಿನ್ನೆಲೆ ವಿಚಾರಿಸಿ, ತಂದೆ-ತಾಯಿಗೂ ಕೆಟ್ಟ ಹೆಸರು ತರುತ್ತೀರಿ, ಸಾಲ ಮಾಡಿ ಬೈಕ್ ಕೊಂಡಿರುವರಿಗೂ ಹಿಂಸೆ ನೀಡುವ ನಿಮ್ಮನ್ನು ಎನ್ ಕೌಂಟರ್ ಮಾಡ್ಬೇಕು ಎಂದರು.

ಎಸ್ಪಿ ಆನಂದ್ ಕುಮಾರ್
ಕಳ್ಳರಿಗೆ ಚಳಿ ಬಿಡಿಸಿದ ಎಸ್ಪಿ ಆನಂದ್ ಕುಮಾರ್
ಶೋಕಿಗಾಗಿ ಬೈಕ್ ಕದ್ದ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಫಯಾಜ್, ಸಯ್ಯದ್ ನೂರ್, ಇನಾಯತ್ ಪಾಷಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಆನಂದ್ ಕುಮಾರ್, ಕಳ್ಳರ ಹಿನ್ನೆಲೆ ವಿಚಾರಿಸಿ ತಂದೆ-ತಾಯಿಗೂ ಕೆಟ್ಟ ಹೆಸರು ತರುತ್ತೀರಿ, ಸಾಲ ಮಾಡಿ ಬೈಕ್ ಕೊಂಡಿರುವರಿಗೂ ಹಿಂಸೆ ನೀಡುವ ನಿಮ್ಮನ್ನು ಎನ್ ಕೌಂಟರ್ ಮಾಡ್ಬೇಕು ಎಂದು ಹೇಳಿ ಕ್ಲಾಸ್ ತೆಗೆದುಕೊಂಡರು.
ಇನ್ನು, ಕೊಳ್ಳೇಗಾಲ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ 9 ಬೈಕ್ ಗಳನ್ನು ಕೊಳ್ಳೇಗಾಲ ಪೊಲೀಸರು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.