ಚಾಮರಾಜನಗರ: ಮರಳಿಕಾಯಿ ಬೀಜವನ್ನು ಬಾದಾಮಿ ಎಂದು ತಿಂದು ಐವರು ಅಸ್ವಸ್ಥರಾಗಿರುವ ಘಟನೆ ತಮಿಳುನಾಡಿನ ತಾಳವಾಡಿಯ ಗಾಜನೂರಲ್ಲಿ ನಡೆದಿದೆ. ಮಂಗಳವಾರ ಸಂಜೆ ಆಟ ಆಡುತ್ತಿದ್ದ ವೇಳೆ 11 ವರ್ಷದ ಆದರ್ಶ ಎಂಬಾತ ಸೇರಿ 7 ವರ್ಷದ ಇಬ್ಬರು ಬಾಲಕಿಯರು, ಬಾಲಕರು ಮರಳಿಕಾಯಿ ಬೀಜವನ್ನು ಜಜ್ಜಿ ತಿಂದಿದ್ದಾರೆ ಎನ್ನಲಾಗಿದೆ. ಬೀಜ ತಿನ್ನುತ್ತಿದ್ದಂತೆ ಗಂಟಲು ಹಿಡಿದುಕೊಂಡು ಅಸ್ವಸ್ಥರಾಗಿದ್ದಾರೆ.
ಚಾಮರಾಜನಗರ: ಬಾದಾಮಿ ಎಂದು ಮರಳಿಕಾಯಿ ಬೀಜ ತಿಂದ ಮಕ್ಕಳು ಅಸ್ವಸ್ಥ - Chamarajanagar Childrens sick news
ಆಡುತ್ತಿದ್ದ ಮಕ್ಕಳು ಬಾದಾಮಿಯೆಂದು ಮರಳಿ ಕಾಯಿ ತಿಂದು ಅಸ್ವಸ್ಥರಾಗಿರುವ ಘಟನೆ ಗಡಿಭಾಗ ತಮಿಳುನಾಡಿನ ತಾಳವಾಡಿಯ ಗಾಜನೂರಲ್ಲಿ ನಡೆದಿದೆ.
![ಚಾಮರಾಜನಗರ: ಬಾದಾಮಿ ಎಂದು ಮರಳಿಕಾಯಿ ಬೀಜ ತಿಂದ ಮಕ್ಕಳು ಅಸ್ವಸ್ಥ Children who eat Maralikayi as almonds were sick](https://etvbharatimages.akamaized.net/etvbharat/prod-images/768-512-15622932-thumbnail-3x2-bin.jpg)
ಮರಳಿಕಾಯಿ ಬೀಜ ತಿಂದ ಮಕ್ಕಳು ಅಸ್ವಸ್ಥ
ಕೂಡಲೇ ಎಚ್ಚೆತ್ತ ಪಾಲಕರು ತಮಿಳುನಾಡಿನ ಆ್ಯಂಬುಲೆನ್ಸ್ ಮಾಡಿಕೊಂಡು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ತಂದು ದಾಖಲಿಸಿದ್ದಾರೆ. ಸದ್ಯ ಐವರು ಮಕ್ಕಳು ಎಮರ್ಜೆನ್ಸಿ ವಾರ್ಡ್ನಲ್ಲಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಇದನ್ನೂ ಓದಿ:ಬಾಣಂತಿ ಸಾವು, ನಾಲ್ಕು ದಿನದ ಕಂದಮ್ಮ ಅನಾಥ.. ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ನಿರ್ಲಕ್ಷ್ಯ ಆರೋಪ