ಚಾಮರಾಜನಗರ:ವೀಕೆಂಡ್ ಮೋಜಿಗಾಗಿ ಸುವರ್ಣಾವತಿ ಜಲಾಶಯಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ಜಲಾಶಯಕ್ಕೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಕಿಕ್ ಏರಿದಾಗ ಕಾಲು ಜಾರಿ ಡ್ಯಾಂನಲ್ಲಿ ಬಿದ್ದ.. ವೀಕೆಂಡ್ ಪಾರ್ಟಿಗೆ ಹೋದವ ಪ್ರಾಣ ಕಳ್ಕೊಂಡ..
ವೀಕೆಂಡ್ ಮೋಜಿಗಾಗಿ ಸುವರ್ಣಾವತಿ ಜಲಾಶಯಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ಜಲಾಶಯಕ್ಕೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಮೃತ ಯುವಕ
ರಾಮಸಮುದ್ರದ ನಿವಾಸಿ ಸಚಿನ್(19) ಮೃತ ದುರ್ದೈವಿ. ಈ ಯುವಕ ಬೈಕ್ ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಿತರೊಂದಿಗೆ ವೀಕೆಂಡ್ ಮೋಜಿಗಾಗಿ ಸುವರ್ಣಾವತಿ ಜಲಾಶಯಕ್ಕೆ ತೆರಳಿದ್ದರು. ಮದ್ಯದ ನಶೆಯಲ್ಲಿದ್ದ ಸಚಿನ್ ಕಾಲು ಜಾರಿ ಜಲಾಶಯದಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಘಟನೆ ನಡೆದು 1 ದಿನ ಕಳೆದರೂ ಪ್ರಕರಣ ಮಾತ್ರ ದಾಖಲಾಗಿಲ್ಲ.