ಕರ್ನಾಟಕ

karnataka

By

Published : May 12, 2019, 8:16 PM IST

ETV Bharat / state

ಕಿಕ್‌ ಏರಿದಾಗ ಕಾಲು ಜಾರಿ ಡ್ಯಾಂನಲ್ಲಿ ಬಿದ್ದ.. ವೀಕೆಂಡ್ ಪಾರ್ಟಿಗೆ ಹೋದವ ಪ್ರಾಣ ಕಳ್ಕೊಂಡ..

ವೀಕೆಂಡ್ ಮೋಜಿಗಾಗಿ ಸುವರ್ಣಾವತಿ ಜಲಾಶಯಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ಜಲಾಶಯಕ್ಕೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

ಮೃತ ಯುವಕ

ಚಾಮರಾಜನಗರ:ವೀಕೆಂಡ್ ಮೋಜಿಗಾಗಿ ಸುವರ್ಣಾವತಿ ಜಲಾಶಯಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ಜಲಾಶಯಕ್ಕೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

ರಾಮಸಮುದ್ರದ ನಿವಾಸಿ ಸಚಿನ್(19) ಮೃತ ದುರ್ದೈವಿ. ಈ ಯುವಕ ಬೈಕ್ ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಿತರೊಂದಿಗೆ ವೀಕೆಂಡ್ ಮೋಜಿಗಾಗಿ ಸುವರ್ಣಾವತಿ ಜಲಾಶಯಕ್ಕೆ ತೆರಳಿದ್ದರು. ಮದ್ಯದ ನಶೆಯಲ್ಲಿದ್ದ ಸಚಿನ್ ಕಾಲು ಜಾರಿ ಜಲಾಶಯದಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಘಟನೆ ನಡೆದು 1 ದಿನ ಕಳೆದರೂ ಪ್ರಕರಣ ಮಾತ್ರ ದಾಖಲಾಗಿಲ್ಲ.

For All Latest Updates

TAGGED:

ABOUT THE AUTHOR

...view details