ಕರ್ನಾಟಕ

karnataka

ETV Bharat / state

ಮೈಲಿಕಲ್ಲಿಗೆ ಬೈಕ್ ಡಿಕ್ಕಿ: ಹೆಲ್ಮೆಟ್ ಧರಿಸಿದ್ದರೆ ಬದುಕುತ್ತಿದ್ದ ಸವಾರ! - Bike, helmet, died,

ತನ್ನ ಜಮೀನಿಗೆ ಹೋಗಿ ಹಿಂತಿರುಗುವ ವೇಳೆ ಬೈಕ್​ ಸವಾರನೊಬ್ಬ ರಸ್ತೆ ಬದಿಯ ಮೈಲಿಕಲ್ಲಿಗೆ ಡಿಕ್ಕಿ ಹೊಡೆದು ಸಾವನ್ನ ಪ್ಪಿದ್ದಾನೆ.

ಮೈಲಿಕಲ್ಲಿಗೆ ಬೈಕ್ ಡಿಕ್ಕಿ

By

Published : Jul 26, 2019, 11:23 PM IST

ಚಾಮರಾಜನಗರ:ಬೈಕ್ ನಿಯಂತ್ರಣ ತಪ್ಪಿ ಮೈಲಿಕಲ್ಲಿಗೆ ಡಿಕ್ಕಿ ಹೊಡೆದು ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬಳಿ ನಡೆದಿದೆ.

ಮಧುವನಹಳ್ಳಿ ಗ್ರಾಮದ ರವಿ ಮೃತ ಬೈಕ್ ಸವಾರ.

ಜಮೀನಿಗೆ ನೀರು ಹಾಯಿಸಿ ಹಿಂತಿರುಗುವಾಗ ಬೈಕ್ ನಿಯಂತ್ರಣ ತಪ್ಪಿ ಮೈಲಿಕಲ್ಲಿಗೆ ಡಿಕ್ಕಿಯಾಗಿದೆ. ಪರಿಣಾಮ ಸವಾರನ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾದ್ದರಿಂದ ಸ್ಥಳದಲ್ಲೇ ರವಿ ಮೃತಪಟ್ಟಿದ್ದಾನೆ.

ಒಂದುವೇಳೆ ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದರೇ ಬದುಕುಳಿಯುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಅತಿವೇಗವೇ ಕಾರಣ ಎಂದು ತಿಳಿದುಬಂದಿದೆ.

For All Latest Updates

ABOUT THE AUTHOR

...view details