ಕರ್ನಾಟಕ

karnataka

ಮೈಸೂರು ದಸರಾಗೆ ಬಂಡೀಪುರದ ಲಕ್ಷ್ಮಿ, ಚೈತ್ರಾ ಆಯ್ಕೆ : ಸೆ.11ಕ್ಕೆ ಗಜ ಪಯಣ ಆರಂಭ

By

Published : Sep 8, 2021, 3:37 PM IST

ಈ ಬಾರಿ ನಡೆಯುವ ಸರಳ ದಸರಾದ ಜಂಬೂ ಸವಾರಿಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದ ಚೈತ್ರಾ ಮತ್ತು ಲಕ್ಷ್ಮಿ ಆನೆಗಳು ಭಾಗಿಯಾಗಲಿವೆ..

Bandipur Lakshmi and Chaitra elephants will participate in Mysore Dasara
ಮೈಸೂರು ದಸರಾಗೆ ಬಂಡೀಪುರದ ಲಕ್ಷ್ಮಿ, ಚೈತ್ರಾ

ಚಾಮರಾಜನಗರ :ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದ ಚೈತ್ರಾ ಮತ್ತು ಲಕ್ಷ್ಮಿ ಆನೆಗಳು ಆಯ್ಕೆಯಾಗಿವೆ.

ಮಾಹಿತಿ ನೀಡಿದ ಬಂಡೀಪುರ ಸಿಎಫ್ಒ ನಟೇಶ್

ಈ ಕುರಿತು ಸಿಎಫ್ಒ ನಟೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಹಂತದಲ್ಲಿ ಆಯ್ಕೆಯಾಗಿದ್ದ ಮೂರು ಆನೆಗಳಲ್ಲಿ ಚೈತ್ರಾ ಮತ್ತು ಲಕ್ಷ್ಮಿ ಆಯ್ಕೆಯಾಗಿವೆ. ಇದೇ ಸೆ.11ಕ್ಕೆ ಮದ್ದೂರು ವಲಯದಿಂದ ಗಜಪಯಣ ಆರಂಭವಾಗಲಿದೆ ಎಂದು ತಿಳಿಸಿದರು.

ಅಂದು ಸ್ಥಳೀಯ ಶಾಸಕ ನಿರಂಜನಕುಮಾರ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಎರಡು ಆನೆಗಳಿಗೆ ಪೂಜೆ ಸಲ್ಲಿಸಿ ದಸರಾ ಕಾರ್ಯಕ್ರಮಕ್ಕೆ ಕಳುಹಿಸಿ ಕೊಡಲಿದ್ದಾರೆ ಎಂದರು.

ಓದಿ: 150ಕ್ಕೂ ಹೆಚ್ಚು ಬೀದಿ ನಾಯಿಗಳ ಜೀವಂತ ಸಮಾಧಿ ; ಶಿವಮೊಗ್ಗದಲ್ಲಿ ಅಮಾನವೀಯತೆ

ABOUT THE AUTHOR

...view details