ಕರ್ನಾಟಕ

karnataka

ETV Bharat / state

ಗುಂಡ್ಲುಪೇಟೆಯಲ್ಲಿ ಆಂತ್ರಾಕ್ಸ್​ ಭೀತಿ: ಜಾನುವಾರುಗಳಿಗೆ ಸಾಮೂಹಿಕ ಲಸಿಕೆ - ಗುಂಡ್ಲುಪೇಟೆಯಲ್ಲಿ ಜಾನುವಾರುಗಳಿಗೆ ಆಂತ್ರಾಕ್ಸ್ ಲಸಿಕೆ

ಗುಂಡ್ಲುಪೇಟೆ ತಾಲ್ಲೂಕಿನ ಹುಲುಸುಗುಂದಿ ಗ್ರಾಮದಲ್ಲಿ ಪಶುಪಾಲನೆ ಇಲಾಖೆಯ ನಿರ್ದೇಶಕ ಡಾ.ಕೆ.ಮಾದೇಶ್ ಮತ್ತು ಸಿಬ್ಬಂದಿಗಳು ಗ್ರಾಮಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮವಾಗಿ ಜಾನುವಾರುಗಳಿಗೆ ಆಂತ್ರಾಕ್ಸ್ ಲಸಿಕೆಯನ್ನು ಹಾಕಿದರು.

Anthrax vaccine for livestock
ಗುಂಡ್ಲುಪೇಟೆಯಲ್ಲಿ ಜಾನುವಾರುಗಳಿಗೆ ಆಂತ್ರಾಕ್ಸ್ ಲಸಿಕೆ

By

Published : May 20, 2020, 10:27 PM IST

ಗುಂಡ್ಲುಪೇಟೆ: ತಾಲೂಕಿನ ಹುಲುಸುಗುಂದಿ ಗ್ರಾಮದಲ್ಲಿ ವಾರದಿಂದ ಹಸುಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿವೆ.

ಪಶುಪಾಲನೆ ಇಲಾಖೆಯ ನಿರ್ದೇಶಕ ಡಾ.ಕೆ.ಮಾದೇಶ್ ಮತ್ತು ಸಿಬ್ಬಂದಿ ಈ ಗ್ರಾಮಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮವಾಗಿ ಜಾನುವಾರುಗಳಿಗೆ ಆಂತ್ರಾಕ್ಸ್ ಲಸಿಕೆ ಹಾಕಿದರು.

ಈ ವೇಳೆ ಮಾತನಾಡಿದ ಅವರು, ಮೃತ ಹಸುವಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ರೋಗದ ಲಕ್ಷಣಗಳು ಕಂಡು ಬಂದಿಲ್ಲ. ಅಜೀರ್ಣದಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಎರಡು ವರ್ಷಗಳ ಹಿಂದೆ ಪಕ್ಕದ ಗ್ರಾಮ ಹೊನ್ನಶೆಟ್ಟರಹುಂಡಿ ಗ್ರಾಮದಲ್ಲಿ ಆಂತ್ರಾಕ್ಸ್ ರೋಗ ಪತ್ತೆಯಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಲಾಗಿದೆ ಎಂದು ತಿಳಿಸಿದರು.

ವಾರದ ಹಿಂದೆ ಗ್ರಾಮದಲ್ಲಿ ಮೂರು ಹಸುಗಳು ಮೃತಪಟ್ಟಿದ್ದವು.

ABOUT THE AUTHOR

...view details