ಚಾಮರಾಜನಗರ: ಲಸಿಕೆ ಪಡೆಯಲು ಹಿಂದೇಟು, ಪರೀಕ್ಷೆ ಮಾಡಿಸಿಕೊಳ್ಳಲು ಭಯ, ಕೇರ್ ಸೆಂಟರ್ಗೆ ಹೋಗಲು ಭೀತಿ.. ಹೀಗೆ ಸಾಕಷ್ಟು ಅರಿವಿನ ಕೊರತೆಯ ನಡುವೆಯೂ ಚಾಮರಾಜನಗದ ಆದಿವಾಸಿಗಳು ಕೋವಿಡ್ ಜಯಿಸಿದ್ದಾರೆ. ಈ ಕುರಿತು ಗಿರಿಜನ ಕಲ್ಯಾಣಾಧಿಕಾರಿ ಹೊನ್ನೇಗೌಡ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ 158 ಹಾಡಿಗಳಿದ್ದು, 75 ಮಂದಿಗೆ ಎರಡನೇ ಅಲೆಯಲ್ಲಿ ಕೋವಿಡ್ ತಗುಲಿತ್ತು. ಇವರಲ್ಲಿ ಓರ್ವ ಮಾತ್ರ ಮೃತಪಟ್ಟಿದ್ದು, ಸಾವಿನ ಬಳಿಕ ನಡೆದ ಪರೀಕ್ಷೆಯಲ್ಲಿ ಕೋವಿಡ್ ದೃಢವಾಗಿತ್ತು ಎಂದು ಅಧಿಕಾರಿ ಹೊನ್ನೇಗೌಡ ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ಹಾಡಿಗಳು ಸದ್ಯ ಕೊರೊನಾ ಮುಕ್ತವಾಗಿದ್ದು, ಕೊರೊನಾ ದೃಢವಾದ ಬಳಿಕ ಆದಿವಾಸಿಗಳು ಗಂಭೀರ ಸ್ಥಿತಿಗೆ ತೆರಳಲಿಲ್ಲ. ಲಾಕ್ಡೌನ್ ವೇಳೆ ಪೌಷ್ಟಿಕ ಆಹಾರ ವಿತರಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.