ಚಾಮರಾಜನಗರ: ಸಿವಿಲ್ ಗುತ್ತಿಗೆದಾರನಿಂದ ಒಂದು ಲಕ್ಷ ರೂ. ಲಂಚ ಪಡೆಯುವಾಗ ಚಾಮರಾಜನಗರದ ಇಬ್ಬರು ಎಂಜಿನಿಯರ್ಗಳು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಮೈಸೂರಿನ ಸಿದ್ಧಾರ್ಥ ಲೇಔಟ್ನಲ್ಲಿ ನಡೆದಿದೆ.
ಚಾಮರಾಜನಗರ ಎಇ ರಾಜಶೇಖರ್ ಹಾಗೂ ಎಇಇ ಶ್ಯಾಮಸುಂದರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು. ದೊಡ್ಡರಾಯಪೇಟೆ ಏರಿ ದುರಸ್ತಿ ಕಾಮಗಾರಿಯ 3.5 ಲಕ್ಷ ರೂ. ಬಿಲ್ ಪಾಸ್ ಮಾಡಲು ಈ ಇಬ್ಬರು ಎಂಜಿನಿಯರ್ಗಳು ಒಂದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ.