ಕರ್ನಾಟಕ

karnataka

ETV Bharat / state

ಲಾಕ್​ಡೌನ್​​​​ ನಡುವೆ ಸರಳ ವಿವಾಹ: ಮದುವೆ ಖರ್ಚನ್ನು ಕೋವಿಡ್ ನಿಧಿಗೆ ನೀಡಿದ ದಂಪತಿ - ಲಾಕ್​ಡೌನ್​​​​ ನಡುವೆ ಸರಳ ವಿವಾಹ

ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸರಳ ವಿವಾಹವಾಗಿ ಮದುವೆ ಖರ್ಚಿನ 50 ಸಾವಿರ ರೂಪಾಯಿಗಳನ್ನ ಕೋವಿಡ್ ಪರಿಹಾರ ನಿಧಿಗೆ ನೀಡಿದ ನವ ಜೋಡಿ ಕಾರ್ಯಕ್ಕೆ ಪೋಷಕರು ಶಹಬ್ಬಾಸ್ ಎಂದಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

A New Couple Given To The Kovid Fund Of Marriage money at chamarajanagara
ಲಾಕ್​ಡೌನ್​​​​ ನಡುವೆ ಸರಳ ವಿವಾಹ

By

Published : Apr 29, 2020, 5:26 PM IST

ಚಾಮರಾಜನಗರ:ಕೊರೊನಾ ಲಾಕ್​ಡೌನ್​​ ಕಾರಣ ಸರಳ ವಿವಾಹವಾದ ದಂಪತಿ ಮದುವೆಯ ಖರ್ಚನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ ಕುಂದಕೆರೆ ಗ್ರಾಮದಲ್ಲಿ ನಡೆದಿದೆ.

ಆನ್‌ಲೈನ್ ಮೂಲಕ ಹಣ ಪಾವತಿ
ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದ ಚಂದ್ರಶೇಖರಮೂರ್ತಿ, ಚಾಮರಾಜನಗರ ತಾಲೂಕಿನ ಹರವೆ ಗ್ರಾಮದ ಮೇಘನಾ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಸಾವಿರ ಹಾಗೂ ಪ್ರಧಾನಿ ಕೋವಿಡ್ ಪರಿಹಾರ ನಿಧಿಗೆ 25 ಸಾವಿರ ರೂ.ವನ್ನು ಆನ್​ಲೈನ್​​​ ಮೂಲಕ ಪಾವತಿಸಿದ್ದಾರೆ.
ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸರಳ ವಿವಾಹವಾಗಿ ಮದುವೆ ಖರ್ಚಿನ ಐವತ್ತು ಸಾವಿರ ರೂಪಾಯಿಗಳನ್ನ ಕೋವಿಡ್ ಪರಿಹಾರ ನಿಧಿಗೆ ನೀಡಿದ ನವಜೋಡಿ ಕಾರ್ಯಕ್ಕೆ ಪೋಷಕರು ಶಹಬ್ಬಾಸ್ ಎಂದಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details