ಕರ್ನಾಟಕ

karnataka

ETV Bharat / state

ಮಾದಪ್ಪನ ಬೆಟ್ಟದ ಅಂಗಡಿ ಮಳಿಗೆಗಾಗಿ ಟವರ್ ಏರಿದ ವ್ಯಾಪಾರಿ!

ಪ್ರಾಧಿಕಾರದ ಮಳಿಗೆಗಳ ಟೆಂಡರ್ ಬೀದಿ ಬದಿ ವ್ಯಾಪಾರಿಗಳಿಗೆ ಸಿಗದಿದ್ದಕ್ಕೆ ವ್ಯಕ್ತಿವೋರ್ವ ಟವರ್ ಏರಿ ಪ್ರತಿಭಟಿಸುತ್ತಿದ್ದಾನೆ. ಆತನನ್ನು ಕೆಳಗಿಳಿಸಲು ಮಲೆಮಹದೇಶ್ವರ್ ಠಾಣೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

By

Published : Mar 11, 2019, 2:39 PM IST

ಮಲೆ ಮಹಾದೇಶ್ವರ ಬೆಟ್ಟದಲ್ಲಿ ಧರಣಿನಿರತ ವ್ಯಕ್ತಿಯೋರ್ವ  ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ್ದಾನೆ.

ಚಾಮರಾಜನಗರ: ಧರಣಿನಿರತ ವ್ಯಕ್ತಿವೋರ್ವ ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿರುವ ಘಟನೆಜಿಲ್ಲೆಯಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.

ಪ್ರಾಧಿಕಾರದ ಮಳಿಗೆಗಳ ಟೆಂಡರ್ ಬೀದಿಬದಿ ವ್ಯಾಪಾರಿಗಳಿಗೆ ಸಿಗದಿದ್ದಕ್ಕೆ ವ್ಯಕ್ತಿಯೋರ್ವ ಟವರ್ ಏರಿ ಪ್ರತಿಭಟಿಸುತ್ತಿದ್ದಾನೆ

ಪ್ರಾಧಿಕಾರದ ಮಳಿಗೆಗಳನ್ನು ಬೀದಿ ಬದಿ ವ್ಯಾಪಾರಿಗಳಿಗೆಟೆಂಡರ್ನೀಡಬೇಕೆಂದು ಒತ್ತಾಯಿಸಿ 50 ಕ್ಕೂ ಹೆಚ್ಚು ಮಂದಿ ಪ್ರತಿಭಟಿಸುತ್ತಿದ್ದಾರೆ. ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ತಮ್ಮ ಬೇಡಿಕೆಗಳನ್ನು ಕೇಳುತ್ತಿಲ್ಲವೆಂದು ಅರೋಪಿಸಿ ಗಿರಿ ಎಂಬಾತ ಟವರ್ ಏರಿ ಕುಳಿತಿದ್ದಾನೆ.

ಮಳಿಗೆಗಳನ್ನು ಬೀದಿಬದಿ ವ್ಯಾಪಾರಿಗಳಿಗೆ ನೀಡಬೇಕು ಎಂಬ ಮನವಿಪತ್ರ ಹಿಡಿದು ಟವರ್ ಏರಿದ್ದು, ಆತನನ್ನು ಕೆಳಗಿಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ABOUT THE AUTHOR

...view details