ಕರ್ನಾಟಕ

karnataka

By

Published : May 12, 2021, 10:20 AM IST

ETV Bharat / state

4 ದಿನ ಸಂಪೂರ್ಣ ಲಾಕ್​ಡೌನ್: ದಿನಸಿ, ತರಕಾರಿ, ಮದ್ಯ ಖರೀದಿಗೆ ಮುಗಿಬಿದ್ದ ಜನ

ಚಾಮರಾಜನಗರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಗುರುವಾರ, ಶುಕ್ರವಾರ, ಶನಿವಾರ ಹಾಗು ಭಾನುವಾರ ಸಂಪೂರ್ಣ ಲಾಕ್​ಡೌನ್ ಮಾಡಲು ನಿರ್ಧರಿಸಲಾಗಿದೆ. ನಾಲ್ಕು ದಿನ ಸಂಪೂರ್ಣ ಲಾಕ್​ಡೌನ್ ಹಿನ್ನೆಲೆಯಲ್ಲಿ ಜನರು ಸಾಮಾಜಿಕ‌ ಅಂತರ ಮರೆತು ದಿನಸಿ, ತರಕಾರಿ ಹಾಗು ಮದ್ಯ ಖರೀದಿಗೆ ಆತುರ ತೋರಿಸಿದ್ದು ಕಂಡುಬಂತು.

chamarajanagar
ದಿನಸಿ, ತರಕಾರಿ, ಮದ್ಯ ಖರೀದಿಗೆ ಮುಗಿಬಿದ್ದ ಜನರು

ಚಾಮರಾಜನಗರ:ಜಿಲ್ಲೆಯಲ್ಲಿ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್​ಡೌನ್ ವಿಧಿಸಿದ್ದು ದಿನಸಿ, ತರಕಾರಿ ಕೊಳ್ಳಲು ಜನರು ಮುಗಿಬಿದ್ದಿದ್ದರು. ಇತ್ತ ಮದ್ಯಪ್ರಿಯರು ಕೂಡ ಬಾರ್​​​​​​​ಗಳ ಮುಂದೆ ಕ್ಯೂ ನಿಂತಿದ್ದರು.

ದಿನಸಿ, ತರಕಾರಿ, ಮದ್ಯ ಖರೀದಿಗೆ ಮುಗಿಬಿದ್ದ ಜನರು

ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಗುರುವಾರ, ಶುಕ್ರವಾರ, ಶನಿವಾರ ಹಾಗು ಭಾನುವಾರ ಸಂಪೂರ್ಣ ಲಾಕ್​ಡೌನ್ ಮಾಡಲು ಜಿಲ್ಲಾ ಟಾಸ್ಕ್ ಫೋರ್ಸ್‌ ಸಮಿತಿ ನಿರ್ಧಾರ ಕೈಗೊಂಡಿದೆ. ಸೋಮವಾರ, ಮಂಗಳವಾರ, ಬುಧವಾರ ರಾಜ್ಯ ಸರ್ಕಾರ ನೀಡಿರುವ ನಿಯಮದಂತೆ ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಇರಲಿದೆ.

ನಾಲ್ಕು ದಿನ ಸಂಪೂರ್ಣ ಲಾಕ್​ಡೌನ್ ಇರಲಿದ್ದು ಜನರು ಸಾಮಾಜಿಕ‌ ಅಂತರ ಮರೆತು ದಿನಸಿ, ತರಕಾರಿ ಹಾಗು ಮದ್ಯ ಖದೀದಿಗೆ ಗುಂಪು ಸೇರಿದ್ದರು.

ಇದನ್ನೂ ಓದಿ:'ಟೆಸ್ಟ್‌ ರಿಪೋರ್ಟ್ ಕೇಳಿ ಚಿಕಿತ್ಸೆಗೆ ನಿರ್ಲಕ್ಷ್ಯ': ಕೊಪ್ಪಳದಲ್ಲಿ ಕಾರಿನಲ್ಲೇ ಕೊನೆಯುಸಿರೆಳೆದ ಮಹಿಳೆ

ABOUT THE AUTHOR

...view details