ಕರ್ನಾಟಕ

karnataka

By

Published : Jul 18, 2020, 11:35 PM IST

ETV Bharat / state

ಚಾಮರಾಜನಗರದಲ್ಲಿ 25 ಜನರಿಗೆ ಸೋಂಕು ದೃಢ.. 40 ಮಂದಿ ಬಿಡುಗಡೆ

ಜಿಲ್ಲೆಯಲ್ಲಿಂದು 25 ಜನರಲ್ಲಿ ಮಹಾಮಾರಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 259ಕ್ಕೆ ಏರಿಕೆಯಾಗಿದೆ‌.

Chamrajnagara corona case
Chamrajnagara corona case

ಚಾಮರಾಜನಗರ:ಜಿಲ್ಲೆಯಲ್ಲಿ ಇಂದು ಬರೋಬ್ಬರಿ 25 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 259ಕ್ಕೆ ಏರಿಕೆಯಾಗಿದೆ‌.

25 ಮಂದಿಯಲ್ಲಿ 15 ಮಂದಿ ಬೆಂಗಳೂರು ಹಾಗೂ ಮೈಸೂರಿನಿಂದ ಬಂದವರಾಗಿದ್ದಾರೆ. ಸೋಂಕಿತರಲ್ಲಿ ಮಧ್ಯ ವಯಸ್ಕರೇ ಹೆಚ್ಚಿದ್ದು, 6 ವರ್ಷದ ಮಗುವಿಗೂ ವೈರಸ್ ತಗುಲಿದೆ.

40 ಮಂದಿ ಮಹಾಮಾರಿ ಸೋಂಕಿನಿಂದ ಬಿಡುಗಡೆಗೊಂಡಿದ್ದು, 81 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ. ಸೋಂಕಿನಿಂದ ಬಿಡುಗಡೆಗೊಂಡ 40 ಮಂದಿಯಲ್ಲಿ ಗುಂಡ್ಲುಪೇಟೆ ಪಾಲು ಬಹಳಷ್ಟಿದ್ದು, ತೆರಕಣಾಂಬಿಯ 75 ವರ್ಷದ ವೃದ್ಧ ಹಾಗೂ ಕೊಳ್ಳೇಗಾಲದ 65 ವರ್ಷದ ವೃದ್ಧೆಯೊಬ್ಬರು ವೈರಸ್ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಪ್ರತಿ 8-9 ದಿನಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಸೋಂಕಿತರ ಸಂಖ್ಯೆ 500 ದಾಟಲಿದೆ ಎಂದು ಡಿಸಿ ಡಾ. ಎಂ.ಆರ್. ರವಿ ತಿಳಿಸಿದರು.

ABOUT THE AUTHOR

...view details