ಕರ್ನಾಟಕ

karnataka

ETV Bharat / state

2019ರಲ್ಲಿ ಚಾಮರಾಜನಗರ ಜಿಲ್ಲೆಯನ್ನ ತಲ್ಲಣಿಸಿದ ಅಪರಾಧ ಪ್ರಕರಣಗಳು.. - 2019 Crime Stories of Chamarajanagar

ಇಡೀ ಜಗತ್ತೇ ಹೊಸ ವರ್ಷದ ನವ ಉಲ್ಲಾಸದಲ್ಲಿದೆ. 2019ನೇ ವರ್ಷಕ್ಕೆ ಗುಡ್​ ಬಾಯ್​ ಹೇಳಿ ನೂತನ ವರ್ಷವನ್ನು ಈಗಾಗಲೇ ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಆದರೆ, ಕಳೆದ 2019ನೇ ವರ್ಷದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಸಾಕಷ್ಟು ಅಪರಾಧ, ದುರ್ಘಟನೆಗಳು ಸಂಭವಿಸಿವೆ. ಕೆಲ ಘಟನೆಗಳಂತೂ ಮನಕಲಕುವಂತಿತ್ತು..

2019 Crime Stories of Chamarajanagar
ಚಾಮರಾಜನಗರದ ಅಪರಾಧ ಸುದ್ದಿಗಳತ್ತ ಹಿನ್ನೋಟ

By

Published : Jan 1, 2020, 12:03 PM IST

ಚಾಮರಾಜನಗರ: ಇಡೀ ಜಗತ್ತೇ ಹೊಸ ವರ್ಷದ ನವ ಉಲ್ಲಾಸದಲ್ಲಿದೆ. 2019ನೇ ವರ್ಷಕ್ಕೆ ಗುಡ್​ ಬಾಯ್​ ಹೇಳಿ ನೂತನ ವರ್ಷವನ್ನು ಈಗಾಗಲೇ ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಆದರೆ, ಕಳೆದ ವರ್ಷದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಸಾಕಷ್ಟು ಅಪರಾಧ, ದುರ್ಘಟನೆಗಳು ಸಂಭವಿಸಿವೆ. ಕೆಲ ಘಟನೆಗಳಂತೂ ಮನಕಲಕುವಂತಿದ್ದವು.. ಆ ಎಲ್ಲದರ ಬಗ್ಗೆ ಒಂದು ಹಿನ್ನೋಟ.

2019ರಲ್ಲಿ ಚಾಮರಾಜನಗರವಷ್ಟೇ ಅಲ್ಲದೇ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಗುಂಡ್ಲುಪೇಟೆ ಹೊರವಲಯದಲ್ಲಿ ಇಡೀ ಕುಟುಂಬವನ್ನೇ ಕೊಂದು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಓಂಕಾರ್ ಪ್ರಸಾದ್ ಪ್ರಕರಣ. ತಂದೆ-ತಾಯಿ, ಗರ್ಭಿಣಿ ಪತ್ನಿ, ಮಗನನ್ನು ಕೊಂದು‌ ತಾನೂ ಗುಂಡಿಕ್ಕಿಕೊಂಡ‌ ಈ ಘಟನೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು.

ಮದುವೆ ಮುಗಿಸಿ ವಿಹಾರಕ್ಕೆಂದು ಕೊಳ್ಳೇಗಾಲ ತಾಲೂಕಿನ‌ ಶಿವನಸಮುದ್ರಕ್ಕೆ ಬಂದಿದ್ದ ಬೆಂಗಳೂರು ಮೂಲದ ಮನೋಜ್ ಕುಮಾರ್, ಲೋಕೇಶ್ ಹಾಗೂ ವೀಣಾ ಎಂಬ ಸ್ನೇಹಿತರು ನೀರುಪಾಲಾಗಿದ್ದು, ಡಾಕ್ಟರ್ ಆಗಬೇಕೆಂದುಕೊಂಡಿದ್ದ ಬೇಗೂರಿನ ಧನಂಜಯ ಎಂಬ ಬಾಲಕ ಬ್ರೈನ್ ಟ್ಯೂಮರ್​​ಗೆ ಬಲಿಯಾದದ್ದು, ಬೇಡರಪುರದ ಶ್ವೇತಾ ಎಂಬ ಮೂರು ವರ್ಷದ ಬಾಲಕಿ ನೀರೆಂದು ಭಾವಿಸಿ ಸೀಮೆ ಎಣ್ಣೆ ಕುಡಿದು ಅಸುನೀಗಿದ್ದು, ಹೊಳೆಯಲ್ಲಿ ಸ್ನಾನ ಮಾಡುವಾಗ ಹೆಬ್ಬಸೂರಿನ‌ ತಾಯಿ-ಮಗಳು ಮೃತಪಟ್ಟ ದುರ್ಷಟನೆ, ಪಾರಿವಾಳ ಹಿಡಿಯುವಾಗ ದೇಗುಲದ ಗೋಪುರದಿಂದ ಬಿದ್ದು ಬಾಲಕನ ಪ್ರಾಣಪಕ್ಷಿ ಹಾರಿ ಹೋಗಿದ್ದು, ನೆಂಟರ ಮನೆಗೆ ಹೋಗುವ ಧಾವಂತದಲ್ಲಿ ರೈಲಿನ ಚಕ್ರಕ್ಕೆ ಸಿಲುಕಿ ಕಾಲು ತುಂಡಾದದ್ದು, ತಾಯಿಗೆ ಅನಾರೋಗ್ಯವೆಂದು ಸಾಲ ಪಡೆದ ಯುವಕನ ಆತ್ಮಹತ್ಯೆ, ಭಗ್ನ ಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ರಸ್ತೆ ಅಪಘಾತದಲ್ಲಿ ಅಸುನೀಗಿದ ತಂದೆ- ತಾಯಿ ಮೃತದೇಹಗಳ ಮುಂದೆ ಕುಳಿತ ಕಂದಮ್ಮ ಹೀಗೆ ಹಲವಾರು ದುರಂತಗಳು 2019ರಲ್ಲಿ ನಡೆದು ಹೋಗಿದೆ.

ಈ ಮೇಲಿನವು ಮನಕಲಕುವ ಘಟನೆಗಳಾದರೆ ಇನ್ನೂ ಕೆಲ ನಾಚಿಕೆಗೇಡಿನ ಘಟನೆಗಳು ಜಿಲ್ಲೆಯಲ್ಲಿ ನಡೆದು ಹೋಗಿದೆ. ಜಿಲ್ಲೆಯ ಏಕಲವ್ಯ ಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳಿದ ವೇಳೆ ಪ್ರಾಂಶುಪಾಲನೇ ಲೈಂಗಿಕ ದೌರ್ಜನ್ಯ ಎಸಗಿದ್ದು, ವೃದ್ಧನೊಬ್ಬ ಪಕ್ಕದ ಮನೆಯ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ್ದು, ಇಡ್ಲಿ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ, ನೆಂಟರ ಮನೆಗೆ ಮಾವಿನ ಹಣ್ಣನ್ನು ತಿನ್ನಲು ಹೋದ 15ರ ಬಾಲಕನೋರ್ವ ಅಪ್ರಾಪ್ತೆ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದು, ಗಾಂಜಾ ಮಾರುವಂತೆ ಮಗನನ್ನೇ ತಾಯಿ ಒತ್ತಾಯಿಸಿದ್ದು, ಕುಡಿಯಲು ಹಣ ನೀಡಲಿಲ್ಲವೆಂದು ಪತ್ನಿಯನ್ನೇ ಕೊಂದ ವರದಿಗಳು ಜನರಲ್ಲಿ ಆಕ್ರೋಶ ಮೂಡಿಸಿದ್ದವು.

ಸ್ಕಿಮ್ಮಿಂಗ್ ಯಂತ್ರ ಬಳಸಿ ಎಟಿಎಂ ದರೋಡೆ, ಒಟಿಪಿ ಪಡೆದು ಹಣ ಎಗರಿಸಿದ ಪ್ರಕರಣಗಳು, ಬೈಕ್ ಕಳ್ಳತನ ಹೀಗೆ ಒಂದಾದ ನಂತರ ಒಂದು ಅಪರಾಧ ಪ್ರಕರಣಗಳು ನಡೆದವು. ನಗರ ಪ್ರದೇಶದಲ್ಲಷ್ಟೇ ಕಾಣುತ್ತಿದ್ದ ಸರಗಳ್ಳತನ ಹಳ್ಳಿಗಳಲ್ಲೂ ನಡೆದು ಮಹಿಳೆಯರ ಚಿನ್ನಾಭರಣ ಎಗರಿಸಿದ ಪ್ರಕರಣಗಳು ನಡೆದಿವೆ.

ಹೇಗಿದೆ ಗಡಿಜಿಲ್ಲೆಯ ಕ್ರೈಂ ರೇಟ್ ?

2019 ರ ಜ.1ರಿಂದ ಡಿ. 25 ರವರರೆಗಿನ ಅಂಕಿ ಅಂಶಗಳ ಪ್ರಕಾರ 2019 ರಲ್ಲಿ ಜಿಲ್ಲೆಯಲ್ಲಿ 17 ಕೊಲೆ ಪ್ರಕರಣಗಳು ದಾಖಲಾಗಿವೆ. ಕೊಲೆಯತ್ನ 59, ಖೋಟಾ ನೋಟಿನ ಪ್ರಕರಣ 1, ಡಕಾಯಿತಿ-5, ರಾಬರಿ-5, ಮನೆಗಳ್ಳತನ 58 ಪ್ರಕರಣಗಳು 2019ನೇ ವರ್ಷದಲ್ಲಿ ದಾಖಲಾಗಿದೆ. ಉಳಿದಂತೆ, ಅಪಘಾತದಲ್ಲಿ 136 ಮಂದಿ ಮೃತಪಟ್ಟಿದ್ದು, 439 ಮಂದಿ ಗಾಯಗೊಂಡಿದ್ದರು. ಜಿಲ್ಲೆಯಲ್ಲಿ ಒಟ್ಟು 99 ಗಲಭೆ ಪ್ರಕರಣಗಳು ನಡೆದಿವೆ. 351 ಮಂದಿ ಹೊಡೆದಾಡದಲ್ಲಿ ಗಾಯಗೊಂಡಿದ್ದಾರೆ‌. 31 ಅಪಹರಣ ಪ್ರಕರಣ, 52 ವರದಕ್ಷಿಣೆ ಪ್ರಕರಣ, 147 ಲೈಂಗಿಕ ದೌರ್ಜನ್ಯ, 8 ಅತ್ಯಾಚಾರ, 21ಸರ್ಕಾರಿ ನೌಕರರ ಮೇಲಿನ ಹಲ್ಲೆ ಪ್ರಕರಣ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.

ಬೆಂಗಳೂರಿಗೂ ಹಬ್ಬಿದ್ದ ಮಲೆಮಹದೇಶ್ವರ ಬೆಟ್ಡದ ತಪ್ಪಲಿನ ಗಾಂಜಾ ಘಮಲು ಈ ಬಾರಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 2018 ರಲ್ಲಿ 46 ಪ್ರಕರಣ ದಾಖಲಾಗಿದ್ದರೆ ಈ ಬಾರಿ ಅದು 10 ಕ್ಕೆ ಇಳಿದಿದೆ. ಪೋಸ್ಕೋ ಪ್ರಕರಣದ ಸಂಖ್ಯೆಯಲ್ಲಿ ಹೆಚ್ಚಾಗಿದ್ದು 28 ಇದ್ದದ್ದು ಈ ಬಾರಿ 31 ಆಗಿವೆ. 513 ಅಬಕಾರಿ ಕೇಸುಗಳು, 20 ಎಸ್ಸಿ-ಎಸ್ಟಿ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು, 4 ಅಕ್ರಮ ಶಸ್ತ್ರಾಸ್ತ್ರ ಪ್ರಕರಣ, 4 ಗೋಹತ್ಯೆ ಪ್ರಕರಣ, 3 ಪ್ರಾಣಿ ಬಲಿ ಪ್ರಕರಣ 173 ಜೂಜಿನ ಪ್ರಕರಣಗಳ ದಾಖಲಾಗಿವೆ.

ABOUT THE AUTHOR

...view details