ಬೆಂಗಳೂರು:ವಿಶ್ವ ಸೈಕಲ್ ದಿನದ ಅಂಗವಾಗಿ ಸೈಕಲ್ ಬಳಸಿ, ಇಂಧನ ಉಳಿಸಿ, ಪರಿಸರ ರಕ್ಷಿಸಿ, ಆರೋಗ್ಯ ವೃದ್ಧಿಸಿ ಘೋಷಣೆಯಡಿ ನಿನ್ನೆ ಜಯನಗರದಲ್ಲಿ ಹೀರೋ ಸೈಕಲ್ಸ್ ವತಿಯಿಂದ ಸೈಕಲ್ ರೇಸ್ ನಡೆಯಿತು.
ಜೂನ್ 3 ವಿಶ್ವ ಸೈಕಲ್ ದಿನ. ಇದರ ಅಂಗವಾಗಿ ಸೈಕಲ್ನ ಮಹತ್ವ ಸಾರುವ ಉದ್ದೇಶದಿಂದ ಹೀರೋ ಸೈಕಲ್ಸ್ ವತಿಯಿಂದ ಸೈಕಲ್ ಬಳಸಿ - ಜಾಗೃತಿ ಮೂಡಿಸಿ ಎಂಬ ಅಭಿಯಾನವನ್ನು ಆಯೋಜಿಸಲಾಗಿತ್ತು. ಜಯನಗರದ 4ನೇ ಬ್ಲಾಕ್ನ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಿಂದ ಕಬ್ಬನ್ ಪಾರ್ಕ್ವರೆಗೆ ಸೈಕಲ್ ರೇಸ್ ನಡೆಯಿತು. ಬೆಳಕು ಹರಿಯುವ ಮುನ್ನವೇ ನೂರಾರು ಮಂದಿ ಪರಿಸರ ಜಾಗೃತಿ ಬಿಂಬಿಸುವ ಫಲಕಗಳನ್ನು ಹಿಡಿದು, ಟಿ-ಶರ್ಟ್ ತೊಟ್ಟು ಲವಲವಿಕೆಯಿಂದ ಕ್ರೀಡಾಂಗಣದಲ್ಲಿ ಹಾಜರಾಗಿ ತಮ್ಮ ಉತ್ಸುಕತೆ ತೋರಿದರು.