ಕರ್ನಾಟಕ

karnataka

By

Published : Jun 21, 2019, 1:05 AM IST

ETV Bharat / state

ಸುವರ್ಣ ಸಂಭ್ರಮದಲ್ಲಿ ಗೆದ್ದು ಅಂಬಾರಿ ಏರಿದ ವಿಜೇತರು!

ಕೆಂಪೇಗೌಡ ಬಸ್ ನಿಲ್ದಾಣವು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ನಡೆಸಲಾದ ಬರಹ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಂಬಾರಿ ಡ್ರೀಮ್ ಕ್ಲಾಸ್ ​ಬಸ್​ನಲ್ಲಿ ಸವಾರಿ ಮಾಡಲು ಅವಕಾಶ ಸಿಕ್ಕಿದೆ.

ಕೆಂಪೇಗೌಡ ಬಸ್ ನಿಲ್ದಾಣ

ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣವು ಕಳೆದ ಜೂನ್ 2ಕ್ಕೆ ತನ್ನ ಸುದೀರ್ಘ 50 ವರ್ಷಗಳ ಸಂಭ್ರಮದ ವಸಂತವನ್ನು ಪೂರೈಸಿದೆ.

ಕೆಂಪೇಗೌಡ ಬಸ್ ನಿಲ್ದಾಣ

ಸುವರ್ಣ ಮಹೋತ್ಸವದಲ್ಲಿರುವ ಈ ಸಂದರ್ಭದಲ್ಲಿ ಕೆಎಸ್ಆರ್​ಟಿಸಿಯು ಸಾರ್ವಜನಿಕರಿಂದ ನಿಲ್ದಾಣದ ಹುಟ್ಟು, ವಿಕಸನ ಮತ್ತು ಮೈಲುಗಲ್ಲುಗಳ ಬಗ್ಗೆ ಬರಹಗಳನ್ನು ಆಹ್ವಾನಿಸಿತ್ತು. ಇದಕ್ಕೆ ಸ್ಪಂದಿಸಿ ಸಾರ್ವಜನಿಕರಿಂದ ಸುಮಾರು 100ಕ್ಕೂ ಹೆಚ್ಚು ಬರಹಗಳು ಟ್ವಿಟರ್, ಫೇಸ್​ಬುಕ್​​, ಇಮೇಲ್ ಹಾಗೂ ಅಂಚೆ ಮೂಲಕ ಬಂದಿದ್ದವು. ಈ ಸ್ಪರ್ಧೆಯಲ್ಲಿ ಬೆಂಗಳೂರಿನ ಚಿನ್ನಪ್ಪ, ಆನಂದರಾಮ ರಾವ್ ವಿಜೇತರಾಗಿದ್ದಾರೆ.

ಇನ್ನು ನಿಗಮವು ಸ್ಪರ್ಧಾ ವಿಜೇತರಿಗಾಗಿ ಬಂಪರ್ ಬಹುಮಾನ ನೀಡುತ್ತಿದ್ದು, ಅಂಬಾರಿ ಡ್ರೀಮ್ ಕ್ಲಾಸ್ ​ಬಸ್​ನಲ್ಲಿ ಸವಾರಿ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ವಿಜೇತರು ತಾವು ಆಯ್ಕೆಯ ಒಂದು ಮಾರ್ಗದಲ್ಲಿ ಹೋಗಿ ಬರಲು ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಅಂಬಾರಿ ಡ್ರೀಮ್ ಕ್ಲಾಸ್ ​ಬಸ್​ ಮೂಲಕ ಎರ್ನಾಕುಲಂ, ಪುಣೆ, ಸಿಕಂದರಾಬಾದ್, ವಿಜಯವಾಡ, ಮೈಸೂರು ಮತ್ತು ಮುಂಬೈಗೆ ಹೋಗಿಬರಬಹುದು.

ಒಟ್ಟಾರೆ, ಬೆಂಗಳೂರು ನಗರದ ಹೆಗ್ಗುರುತಿಗೆ 50 ವರ್ಷಗಳು ತುಂಬಿದ್ದು, ಇದೇ ನೆಪದಲ್ಲಿ ಸ್ಪರ್ಧಾ ವಿಜೇತರಿಗೆ ಟೂರ್ ಹೋಗುವ ಅವಕಾಶ ಒಲಿದಿದೆ.

ABOUT THE AUTHOR

...view details