ಕರ್ನಾಟಕ

karnataka

ETV Bharat / state

ಸಿಎಂ ಅಷ್ಟಕ್ಕೆ ಬೇಜಾರಾದ್ರೆ ನಾವೇನು ಮಾಡೋಕೆ ಆಗುತ್ತೆ? ಸಚಿವ ಜಮೀರ್ ಟಾಂಗ್ - Jameer khan

ಸುಮಲತಾ ಡಿನ್ನರ್‌ ಪಾರ್ಟಿಗೆ ಬರ್ತಾರೆ ಅಂತ ಯಾರಿಗೂ ಗೊತ್ತಿರಲಿಲ್ಲ. ಊಟಕ್ಕೆ ಹೋಗೋದು ತಪ್ಪಲ್ಲ, ಯಾರೇ ಕರೆದರೂ ಊಟಕ್ಕೆ ಹೋಗ್ತಾರೆ. ನನ್ನನ್ನು ಕರೆದರೂ ನಾನು ಊಟಕ್ಕೆ ಹೋಗುತ್ತೇನೆ. ಬರ್ತ್​ಡೇ ಪಾರ್ಟಿ ಅಂತ ಹೋಗಿದ್ದಾರೆ. ಇದರಲ್ಲಿ ತಪ್ಪೇನಿದೆ? ಎಂದು ಸಚಿವ ಜಮೀರ್ ಅಹಮ್ಮದ್ ಸಮರ್ಥಿಸಿಕೊಂಡರು.

ಸಚಿವ ಜಮೀರ್ ಅಹಮ್ಮದ್

By

Published : May 3, 2019, 6:21 PM IST

ಬೆಂಗಳೂರು: ಊಟಕ್ಕೆ ಹೋಗುವುದು ತಪ್ಪಲ್ಲ, ಸ್ನೇಹಿತರು ಕರೆದಾಗ ಹೋಗಿದ್ದಾರೆ ಅಷ್ಟೇ. ಅಷ್ಟಕ್ಕೆ ಕುಮಾರಸ್ವಾಮಿ ಬೇಸರಗೊಂಡ್ರೆ ನಾವೇನು ಮಾಡೋಕೆ ಆಗುತ್ತೆ ಎಂದು ಪರೋಕ್ಷವಾಗಿ ಸಚಿವ ಜಮೀರ್ ಅಹಮ್ಮದ್ ಸಿಎಂಗೆ ಟಾಂಗ್ ನೀಡಿದರು.

ಸಿಎಂ ಕುಮಾರಸ್ವಾಮಿಗೆ ಸಚಿವ ಜಮೀರ್ ಅಹಮ್ಮದ್ ಟಾಂಗ್

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸೋಲಲ್ಲ, 1.5 - 2 ಲಕ್ಷ ಮತಗಳ ಅಂತರದಿಂದ ಗೆಲ್ತಾರೆ. ಮಂಡ್ಯ ಹಿಂದೆ ನಡೆದ ಉಪಚುನಾವಣೆಯಲ್ಲಿ ಎಲ್ಲರನ್ನೂ ಕರೆಸಿ ಸಿಎಂ ಮಾತನಾಡಿದ್ದರು. ಆದ್ರೆ, ಲೋಕಸಭಾ ಚುನಾವಣೆಯಲ್ಲಿ ಸಿಎಂ ಎಲ್ಲರನ್ನು ವಿಶ್ವಾಸಕ್ಕೆ ತೆಗದುಕೊಂಡಿಲ್ಲ. ಹಾಗಾಗಿ ಚೆಲುವರಾಯಸ್ವಾಮಿ ಮತ್ತವರ ತಂಡ ಅಸಮಾಧಾನಗೊಂಡಿದೆ ಎಂದು ಎಚ್‌. ಡಿ ಕುಮಾರಸ್ವಾಮಿ ಅವರಿಗೂ ಗೊತ್ತಿದೆ ಎಂದರು.

For All Latest Updates

TAGGED:

Jameer khan

ABOUT THE AUTHOR

...view details