ಕರ್ನಾಟಕ

karnataka

ETV Bharat / state

ಬಿಜೆಪಿಯ ಯಾವುದೇ ಆಮಿಷಗಳಿಗೆ ಬಗ್ಗೋದಿಲ್ಲ: ನಿಸರ್ಗ ನಾರಾಯಣಸ್ವಾಮಿ - undefined

ನಮಗೆ ಯಾರಿಂದಲೂ ಯಾವುದೇ ಆಮಿಷಗಳು ಬಂದಿಲ್ಲ, ಬಂದರೂ ನಾವು ಬಗ್ಗೋದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯ ಆಮಿಷಗಳಿಗೆ ಬಗ್ಗೋದಿಲ್ಲ ಎಂದು ನಿಸರ್ಗ ನಾರಾಯಣಸ್ವಾಮಿ ಸ್ಪಷ್ಟನೆ

By

Published : Jul 10, 2019, 11:46 AM IST

ಬೆಂಗಳೂರು: ಜೆಡಿಎಸ್ ಶಾಸಕರೆಲ್ಲಾ ರೆಸಾರ್ಟ್​ನಲ್ಲಿ ಸೇಫ್ ಆಗಿದ್ದಾರೆ. ಮುಂಬೈನಲ್ಲಿರುವ ಮೂವರು ಶಾಸಕರು ಹೊರತುಪಡಿಸಿ ಬಹುತೇಕ ಜೆಡಿಎಸ್ ಶಾಸಕರು ಇಲ್ಲೇ ಇದ್ದೇವೆ. ಬಿಜೆಪಿಯ ಯಾವುದೇ ಆಮಿಷಗಳಿಗೆ ನಾವು ಬಗ್ಗೋದಿಲ್ಲ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದ್ದಾರೆ.

ಬಿಜೆಪಿಯ ಆಮಿಷಗಳಿಗೆ ಬಗ್ಗೋದಿಲ್ಲ: ನಿಸರ್ಗ ನಾರಾಯಣಸ್ವಾಮಿ ಸ್ಪಷ್ಟನೆ

ದೇವನಹಳ್ಳಿ ನಂದಿ ಹಿಲ್ಸ್ ಮಾರ್ಗ ಮಧ್ಯೆ ಇರುವ ಗಾಲ್ಪ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು, ಕುಮಾರಣ್ಣ, ಅನಿತಕ್ಕ, ರೇವಣ್ಣ ಸೇರಿದಂತೆ ಪಕ್ಷದ ಎಲ್ಲ ಶಾಸಕರು ಸೇಫ್​ ಆಗಿದ್ದೇವೆ. ನಮಗೆ ಯಾರಿಂದಲೂ ಯಾವುದೇ ಆಮಿಷಗಳು ಬಂದಿಲ್ಲ, ಬಂದರೂ ನಾವು ಬಗ್ಗೋದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಹೊರಗಡೆ ಹೋದರೆ ಏನೇನೋ ಹೇಳ್ತಾರೆ ಅಂತ ನಾವೆಲ್ಲರೂ ರೆಸಾರ್ಟ್​ನಲ್ಲೇ ಒಟ್ಟಿಗೆ ಇದ್ದೇವೆ ಎಂದರು.

For All Latest Updates

TAGGED:

ABOUT THE AUTHOR

...view details