ಕರ್ನಾಟಕ

karnataka

ETV Bharat / state

ರಾತ್ರೋರಾತ್ರಿ ಜೆಡಿಎಸ್ ಮುಖಂಡನ ಬಂಧನ, ಬಿಡುಗಡೆ

ಹೋಟೆಲ್​ಗೆ ನುಗ್ಗಿ ವ್ಯಕ್ತಿವೋರ್ವನಿಗೆ ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ತಡ ರಾತ್ರಿ ಅಲ್ತಾಫ್ ಖಾನ್​ನನ್ನ ಬಂಧಿಸಿ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ.

By

Published : Mar 10, 2019, 11:32 AM IST

ಅಲ್ತಾಫ್ ಖಾನ್

ಬೆಂಗಳೂರು: ವ್ಯಕ್ತಿವೋರ್ವನಿಗೆ ಬೆದರಿಕೆ ಹಾಕಿದ ವಿಚಾರವಾಗಿ ರಾತ್ರೋರಾತ್ರಿ ಜೆಡಿಎಸ್ ಮುಖಂಡ ಅಲ್ತಾಫ್ ಖಾನ್​ನನ್ನು ಬಂಧಿಸಿ ಬೇಲ್ ಮೇಲೆ ಬಿಡುಗಡೆ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದೆ.

ಜೆಡಿಎಸ್​ ಮುಖಂಡ ಅಲ್ತಾಫ್​ ಖಾನ್​ ಬಿಡುಗಡೆ ಆಗಿರುವವರು. ಅಲ್ತಾಫ್​ ಹೋಟೆಲ್​ಗೆ ನುಗ್ಗಿ ವ್ಯಕ್ತಿವೋರ್ವನಿಗೆ ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಉಪ್ಪಾರಪೇಟೆ ಪೊಲೀಸರು ತಡರಾತ್ರಿ ಅಲ್ತಾಫ್ ಖಾನ್ ಬಂಧಿಸಿ, ತಡರಾತ್ರಿವರೆಗೆ ವಿಚಾರಣೆ ನಡೆಸಿ ಬಳಿಕ ನ್ಯಾಯಾಧಿಶರ ನಿವಾಸಕ್ಕೆ ಹಾಜರು ಪಡಿಸಿದ್ರು.

ಈ ವೇಳೆ ನ್ಯಾಯಾಧೀಶರ ಸಮ್ಮುಖದಲ್ಲೇ ಬೇಲ್ ಪಡೆದು ಅಲ್ತಾಫ್ ಖಾನ್ ರಿಲೀಸ್ ಆಗಿದ್ದಾನೆ.‌ ಇನ್ನು ತಮ್ಮ ಬಂಧನ ಮತ್ತು ಬಿಡುಗಡೆ ವಿಚಾರದ ಕುರಿತು ಅಲ್ತಾಫ್​ ಪತ್ರಿಕಾಗೋಷ್ಟಿ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details