ಕರ್ನಾಟಕ

karnataka

ETV Bharat / state

ಶ್ರೀಲಂಕಾ ಸರಣಿ ಸ್ಫೋಟ: ಬೆಂಗಳೂರಿನತ್ತ ಮುಖ ಮಾಡಿದ ಕನ್ನಡಿಗರು - undefined

ಕೇವಲ ಕನ್ನಡಿಗರಷ್ಟೇ ಅಲ್ಲದೆ ನೆರೆಯ ಆಂಧ್ರದ ಕರ್ನೂಲು ಮೂಲದ ಮೂವತ್ತು ಜನರು ತಡ ರಾತ್ರಿ ಬೆಂಗಳೂರಿನ ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಬೆಂಗಳೂರಿಗೆ ಆಗಮಿಸದ ಕನ್ನಡಿಗ

By

Published : Apr 23, 2019, 9:07 AM IST

ಬೆಂಗಳೂರು: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಿಂದ ಬೆಚ್ಚಿದ ಕನ್ನಡಿಗರು ತಂಡೋಪತಂಡವಾಗಿ ತಾಯಿನಾಡಿನತ್ತ ಮುಖ ಮಾಡಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಹೆಚ್ಎಸ್ಆರ್ ಬಡಾವಣೆ ನಿವಾಸಿ ಮಯೂರ್ ಮತ್ತು ಅಮೂಲ್ಯ ದಂಪತಿ, ತಮ್ಮ ಮಗು ಜೊತೆಗೆ ಕ್ಷೇಮವಾಗಿ ಬೆಂಗಳೂರಿಗೆ ಆಗಮಿಸಿದರು. ಕಳೆದ ರಾತ್ರಿ ಏರ್ ಇಂಡಿಯಾ ವಿಮಾನ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ದಂಪತಿ, ಶ್ರೀಲಂಕಾದ ಸರಣಿ ಬಾಂಬ್‌ ಸ್ಫೋಟದ ಬಗ್ಗೆ ಆಘಾತಕಾರಿ ಸಂಗತಿಗಳನ್ನ ಹಂಚಿಕೊಂಡರು. 'ಬಾಂಬ್ ಸ್ಫೋಟವಾದ ಶಾಂಗ್ರೀಲಾ ಹೋಟೆಲ್ ಪಕ್ಕದ ಮತ್ತೊಂದು ಹೋಟೆಲ್​​​ನಲ್ಲಿ ತಂಗಿದ್ದೆವು. ಅದೃಷ್ಟವಶಾತ್ ಘಟನೆ ನಡೆದ ದಿನ ಬೇರೆ ಕಡೆ ತೆರಳಿದ್ದರಿಂದ ಸಂಭವನೀಯ ದುರಂತದಿಂದ ಪಾರಾಗಿದ್ದೇವೆ' ಎಂದು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದರು.

ಶ್ರೀಲಂಕಾದಿಂದ ಬೆಂಗಳೂರಿಗೆ ಆಗಮಿಸದ ಕನ್ನಡಿಗ

'ನಮಗೆ ಎಂದೂ ಈ ರೀತಿಯ ಅನುಭವ ಆಗಿಲ್ಲ. ಬಾಂಬ್ ಸ್ಫೋಟದ ಬಳಿಕ ನಾವೆಲ್ಲಾ ಸಾಕಷ್ಟು ಭಯಪಟ್ಟಿದ್ದೆವು. ದೇವರ ದಯೆ ನಾವೆಲ್ಲಾ ಮತ್ತೆ ನಮ್ಮ ನಾಡಿಗೆ ಬಂದಿದ್ದೇವೆ' ಎಂದು ಬೆಂಗಳೂರು ನಿವಾಸಿ ನಿತೇಶ್ ನಾಯಕ್ ಸೇರಿದಂತೆ ಹಲವರು ವಿಧ್ವಂಸಕ ದಾಳಿ ಕುರಿತು ಆತಂಕ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details