ಕರ್ನಾಟಕ

karnataka

ETV Bharat / state

ಎಂತೆಂಥವರಿರ್ತಾರೆ ನೋಡಿ.. ಕ್ಲೋಸ್ ಆದ ಅಕೌಂಟ್ ರೀ ಒಪನ್ ಮಾಡಿ ಅವ್ಯವಹಾರ.. ಐಟಿ ನೋಟಿಸ್‌ಗೆ ಬೆಚ್ಚಿದ ದಂಪತಿ.. - undefined

ಕ್ಲೋಸ್ ಆಗಿರುವ ದಂಪತಿಯ ಬ್ಯಾಂಕ್​ ಅಕೌಂಟ್‌ನಲ್ಲಿ ಕೋಟಿ ಕೋಟಿ ರೂ. ಅಕ್ರಮ ಅವ್ಯವಹಾರ ನಡೆದಿದ್ದು, ಇದೀಗ ಆದಾಯ ತೆರಿಗೆ ಅಧಿಕಾರಿಗಳು ದಂಪತಿಗೆ ನೋಟಿಸ್ ನೀಡಿ ವ್ಯಾಪಾರ ವಹಿವಾಟಿನ ಬಗ್ಗೆ ಬೇಕಾದ ದಾಖಲೆ ಒದಗಿಸುವಂತೆ ತಿಳಿಸಿದ್ದಾರೆ.

ಅವ್ಯವಹಾರ

By

Published : Jun 23, 2019, 11:02 AM IST

ಬೆಂಗಳೂರು: ಕ್ಲೋಸ್ ಆಗಿದ್ದ ಬ್ಯಾಂಕ್ ಅಕೌಂಟ್ ರೀ ಒಪನ್ ಮಾಡಿ 2.5 ಕೋಟಿ ರೂ. ಟ್ರಾಂಜಾಕ್ಷನ್​ ಮಾಡಿ ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ‌.

ಏನಿದು ಘಟನೆ?

ಕಂಚನಾ ಹಾಗೂ ಮಂಡೇಕರ್ ಎಂಬ ದಂಪತಿ ಬಸವನಗುಡಿಯ ಹೆಚ್‌ಬಿ ಸಮಾಜ ರಸ್ತೆಯಲ್ಲಿರುವ ಶ್ರೀ ಚರಣ್ ಕೋ ಆಪರೇಟಿವ್ ಬ್ಯಾಂಕ್​ನಲ್ಲಿ ಅಕೌಂಟ್ ಹೊಂದಿದ್ದರು. ಹಾಗೇ ಇವರು ಸೀಮ್‌ಲೈನ್ ಟೆಕ್ನಿಕ್ ಎಂಬ ಹೆಸರಿನ ಕಂಪನಿ ನಡೆಸುತ್ತಿದ್ದರು. ‌

ಹೀಗಾಗಿ ದಂಪತಿಗೆ ಚರಣ್ ಕೋ ಆಪರೇಟಿವ್ ಬ್ಯಾಂಕ್​ನ ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಪ್ರಸನ್ನ ಎಂಬುವರ ಪರಿಚಯವಾಗಿತ್ತು. ತಮ್ಮ ಕಂಪನಿಯ ವಹಿವಾಟಿನಲ್ಲಿ ಬರುವ ಚೆಕ್​ನ ದಂಪತಿ ಪ್ರಸನ್ನ ಎಂಬುವರಿಗೆ ನೀಡಿ ಹಣ ಜಮೆ ಮಾಡುತ್ತಿದ್ದರು. ಆದರೆ, ದಂಪತಿ ಈ ವಹಿವಾಟನ್ನ 2004 ರಿಂದ 5ರವರೆಗೆ ಮಾತ್ರ ಮಾಡಿದ್ದರು. ಇದಾದ ಬಳಿಕ 2008ರಲ್ಲಿ ಹಣಕಾಸಿನ ವ್ಯವಹಾರ ನಡೆಸುವುದನ್ನು ನಿಲ್ಲಿಸಿದ್ದರು. ಹಾಗಾಗಿ ಅಕೌಂಟ್ ಕ್ಲೋಸ್ ಮಾಡಲಾಗಿತ್ತು.

ಅವ್ಯವಹಾರ ಕುರಿತ ದೂರು

ಆದರೆ, ಇದೀಗ ದಂಪತಿಯ ಗಮನಕ್ಕೂ ಬಾರದೇ 2019ರ ಮೇನಲ್ಲಿ 2 ಕೋಟಿ 25 ಲಕ್ಷ ರೂ. ಅಕ್ರಮ ಹಣವನ್ನ ಹಂತ ಹಂತವಾಗಿ ಜಮೆ ಮಾಡಲಾಗಿದ್ದು, ಹಣವನ್ನ ಚೆಕ್​ಗಳ ಮೂಲಕ ಹಲವರಿಗೆ ವರ್ಗಾವಣೆ ಮಾಡಿರುವುದು ಕಂಡು ಬಂದಿದೆ.‌ ಹೀಗಾಗಿ ಆದಾಯ ತೆರಿಗೆ ಅಧಿಕಾರಿಗಳು ದಂಪತಿಗೆ ನೋಟಿಸ್ ನೀಡಿ ಕೋಟಿ ಕೋಟಿ ವಹಿವಾಟಿನ ಬಗ್ಗೆ ಬೇಕಾದ ದಾಖಲೆ ಒದಗಿಸಿ ಎಂದು ತಿಳಿಸಿದ್ದಾರೆ.ದಂಪತಿಗೆ ಐಟಿ ನೋಟಿಸ್ ನೋಡಿ ಶಾಕ್ ಆಗಿದೆ. ಈ ಕುರಿತು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details