ಕರ್ನಾಟಕ

karnataka

ಐಎಂಎ ಹಗರಣದ ಕುರಿತು ದಿನೇಶ್​​ ಗುಂಡೂರಾವ್​ಗೆ ಮಾಹಿತಿ ನೀಡಿದ ಜಮೀರ್​​

By

Published : Jun 15, 2019, 4:57 PM IST

ಐಎಂಎ ಹಗರಣದ ಕುರಿತು ನಡೆದಿರುವ ತನಿಖೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ಗೆ ಸಚಿವ ಜಮೀರ್ ಅಹಮ್ಮದ್ ಮಾಹಿತಿ ನೀಡಿದರು.

ದಿನೇಶ್ ಗುಂಡೂರಾವ್

ಬೆಂಗಳೂರು: ಐಎಂಎ ಹಗರಣದ ಸಂಬಂಧ ಮಾಹಿತಿ ಪಡೆಯಲು ಸಚಿವ ಜಮೀರ್ ಅಹಮ್ಮದ್​ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬುಲಾವ್ ಕೊಟ್ಟಿದ್ದರು. ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡಲು ಕೆಪಿಸಿಸಿ ಕಚೇರಿಗೆ ಆಗಮಿಸಿದ ಸಚಿವ ಜಮೀರ್ ಅಹಮ್ಮದ್ ಖಾನ್, ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚಿಸಿದರು.

ಸಚಿವ ಜಮೀರ್​ಗೆ ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹಮ್ಮದ್ ಹಾಗೂ ರಿಜ್ವಾನ್ ಅರ್ಷದ್ ಸಾಥ್ ಕೊಟ್ಟರು. ಇಡೀ ಪ್ರಕರಣದ ಮಾಹಿತಿ ಜೊತೆಗೆ ರೋಶನ್ ಬೇಗ್ ಪಾತ್ರದ ಬಗ್ಗೆಯೂ ದಿನೇಶ್ ಗುಂಡೂರಾವ್ ಮಾಹಿತಿ ಪಡೆದರು.

ಭೇಟಿ ಬಳಿಕ ಸಚಿವ ಜಮೀರ್ ಅಹಮ್ಮದ್​ ಖಾನ್ ಮಾತನಾಡಿ, ದಿನೇಶ್ ಜತೆ ಐಎಂಎ ಬಗ್ಗೆ ಇದುವರೆಗೆ ಆಗಿರುವ ತನಿಖೆ ಕುರಿತು ಮಾಹಿತಿ ನೀಡಿದ್ದೇನೆ. ರೋಷನ್​ ಬೇಗ್ ಪಾತ್ರ ಇದೆ ಅನ್ನೋದಕ್ಕೆ ದಾಖಲೆ ಬೇಕು. ಆಡಿಯೋದಲ್ಲಿ ಅವರ ಹೆಸರು ಪ್ರಸ್ತಾಪಿಸಲಾಗಿದೆ. ಆದರೆ ಆಡಿಯೋವನ್ನ ಧ್ವನಿ ಪರೀಕ್ಷೆಗೆ ಕಳುಹಿಸಲಾಗಿದೆ. ಅದು ಮನ್ಸೂರ್ ಧ್ವನಿ ಅನ್ನೋದು ಸಾಬೀತಾದ್ರೆ ರೋಷನ್ ಬೇಗ್ ಪಾತ್ರದ ಬಗ್ಗೆ ಮಾತನಾಡಬಹುದು ಎಂದರು.

ದಿನೇಶ್ ಗುಂಡೂರಾವ್​ಗೆ ಎಲ್ಲಾ ಮಾಹಿತಿ ನೀಡಿದ್ದೇವೆ. ನಾನು ಈ ವಿಚಾರದಲ್ಲಿ ಮೃದು ಧೋರಣೆ ತಾಳಿಲ್ಲ. ಸಿಎಂ ಭೇಟಿ ಮಾಡಿ ನಾವೇ ತನಿಖೆಗೆ ಒತ್ತಾಯಿಸಿದ್ದು, ಜನರಿಗೆ ಅನ್ಯಾಯ ಆಗಿದೆ ಅಂತ ಮೊದಲು ಹೋದವನು ನಾನು ಎಂದು ಬಿಎಸ್​ವೈ ವಿರುದ್ಧ ಜಮೀರ್ ವಾಗ್ದಾಳಿ ನಡೆಸಿದರು.

For All Latest Updates

TAGGED:

ABOUT THE AUTHOR

...view details