ಕರ್ನಾಟಕ

karnataka

ETV Bharat / state

ಕೋರ್ಟ್​ಗೆ ಸಂಜೆಯೊಳಗೆ‌ ಅತೃಪ್ತ ಶಾಸಕರ ಕುರಿತು ನನ್ನ ನಿರ್ಧಾರ ತಿಳಿಸುತ್ತೇನೆ: ಸ್ಪೀಕರ್​​​ - undefined

ಸುಪ್ರೀಂ ಕೋರ್ಟ್ ಸೂಚನೆ ನೀಡಿರುವ ವಿಚಾರವಾಗಿ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, ಹತ್ತು ಶಾಸಕರು ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.‌ ಆ ಸಂಬಂಧ ವಿಚಾರಣೆ ಮಾಡುತ್ತೇನೆ. ಸಂಜೆಯೊಳಗಡೆ ಒಂದು ತೀರ್ಮಾನ ಮಾಡಿ, ಕೋರ್ಟ್​ಗೆ ತಿಳಿಸಲಾಗುವುದು. ಜೊತೆಗೆ ಸುಪ್ರೀಂ ಕೋರ್ಟ್​ಗೆ ನನ್ನ ಪರವಾಗಿ ವಕೀಲರು ಹಾಜರಾಗಲಿದ್ದಾರೆ ಎಂದು ತಿಳಿಸಿದರು.

ಸ್ಪೀಕರ್ ರಮೇಶ್ ಕುಮಾರ್

By

Published : Jul 11, 2019, 3:32 PM IST

ಬೆಂಗಳೂರು: ಅತೃಪ್ತ ಶಾಸಕರ ಸಂಬಂಧ ವಿಚಾರಣೆ ಮಾಡಿ ನಿಮ್ಮ ನಿರ್ಧಾರ ತಿಳಿಸುವಂತೆ ಸುಪ್ರೀಂ ಕೋರ್ಟ್ ಹೇಳಿದ್ದು, ಅದರ ಪ್ರಕಾರ ಸಂಜೆಯೊಳಗೆ ನನ್ನ‌ ನಿರ್ಧಾರವನ್ನು ಕೋರ್ಟ್​ಗೆ ತಿಳಿಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಸುಪ್ರೀಂ ಕೋರ್ಟ್ ಸೂಚನೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹತ್ತು ಶಾಸಕರು ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.‌ ಆ ಸಂಬಂಧ ವಿಚಾರಣೆ ಮಾಡುತ್ತೇನೆ. ಸಂಜೆಯೊಳಗಡೆ ಒಂದು ತೀರ್ಮಾನ ಮಾಡಿ, ಕೋರ್ಟ್​ಗೆ ತಿಳಿಸಲಾಗುವುದು. ಜೊತೆಗೆ ಸುಪ್ರೀಂ ಕೋರ್ಟ್​ಗೆ ನನ್ನ ಪರವಾಗಿ ವಕೀಲರು ಹಾಜರಾಗಲಿದ್ದಾರೆ ಎಂದು ತಿಳಿಸಿದರು.

ನನ್ನ ಪರ ವಕೀಲರು ಏನು ಹೇಳಬೇಕು ಅದನ್ನು ಕೋರ್ಟ್​ನಲ್ಲಿ ಹೇಳುತ್ತಾರೆ. ಆಮೇಲೆ ಏನಾಗುತ್ತದೆ ನೋಡೋಣ. ಹತ್ತು ಜನ ಶಾಸಕರು ಮೊದಲು ಇಲ್ಲಿಗೆ ಬರಲಿ, ಪೊಲೀಸರು ಭದ್ರತೆ ಕೊಡುತ್ತಾರೆ. ಅವರು ಏನು ಹೇಳುತ್ತಾರೆ ಎಂದು ಕೇಳಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details