ಕರ್ನಾಟಕ

karnataka

ETV Bharat / state

ಬೆಂಗಳೂರು ಇನ್ಸ್​ಪೆಕ್ಟರ್​​​ ನೋಟಿಸ್​ಗೆ ತಕ್ಕ ಉತ್ತರ... ವೈರಲ್​​ ಆಯ್ತು ಪೇದೆಯ ಲೆಟರ್​​​ - ಪೇದೆ ಶ್ರೀಧರ್ ಉತ್ತರ

ಜಯನಗರ ಪೊಲೀಸ್ ಇನ್ಸ್​ಪೆಕ್ಟರ್​ ನೀಡಿದ ನೋಟಿಸ್​ಗೆ ಪೇದೆ ಶ್ರೀಧರ್ ಎಂಬುವರಿಂದ ಉತ್ತರ. ಪತ್ರದ ಮೂಲಕ ತಿರಗೇಟು ನೀಡಿದ ಶ್ರೀಧರ್. ಕರ್ತವ್ಯಕ್ಕೆ ತಡವಾಗಿ ಬಂದಿದ್ದಕ್ಕೆ ನೋಟಿಸ್​ ನೀಡಿದ್ದ ಇನ್ಸ್​ಪೆಕ್ಟರ್​.

ವೈರಲ್ ಆಯ್ತು ಪೇದೆಯ ಲೆಟರ್​

By

Published : Apr 15, 2019, 10:47 AM IST

ಬೆಂಗಳೂರು: ಕರ್ತವ್ಯಕ್ಕೆ ತಡವಾಗಿ ಹಾಜರಾಗಿದ್ದಕ್ಕೆ ನೋಟಿಸ್​ ನೀಡಿದ್ದ ಜಯನಗರ ಪೊಲೀಸ್ ಇನ್ಸ್​ಪೆಕ್ಟರ್​ಗೆ ಪೇದೆ ಶ್ರೀಧರ್ ಉತ್ತರ ನೀಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

ಜಯನಗರ ಠಾಣಾ ವ್ಯಾಪ್ತಿಯ ಐವರು ಬೀಟ್ ಸಿಬ್ಬಂದಿ ನಿತ್ಯ ತಡವಾಗಿ ಕೆಲಸಕ್ಕೆ ಬರ್ತಿದ್ರು ಎನ್ನಲಾಗಿದೆ. ಹೀಗಾಗಿ ಪೇದೆ ಶ್ರೀಧರ್ ಸೇರಿ 5 ಮಂದಿಗೆ ಜಯನಗರ ಠಾಣೆ ಇನ್ಸ್​ಪೆಕ್ಟರ್ ನೋಟಿಸ್​ ನೀಡಿದ್ದರು. ಈ ನೋಟಿಸ್​ಗೆ ಪ್ರತ್ಯುತ್ತರವಾಗಿ ಪೇದೆ ಶ್ರೀಧರ್​ ಪತ್ರ ಬರೆದಿರುವುದು ಬಹಳಷ್ಟು ಸದ್ದು ಮಾಡುತ್ತಿದೆ.

ನೋಟಿಸ್​

ಪೇದೆ ಶ್ರೀಧರ್ ಗೌಡ ಪತ್ರದ ಮೂಲಕ ಉತ್ತರ ನೀಡಿದ್ದು ಹೀಗೆ ...

ನಿಮ್ಮ ರೀತಿ ಬೆಳಗ್ಗೆ ಸುಖಸಾಗರ್ ಅಥವಾ ಯುಡಿ ಹೋಟೆಲ್​ನಲ್ಲಿ ಟಿಫನ್, ಮಧ್ಯಾಹ್ನ ಖಾನಾವಳಿಯಲ್ಲಿ ಊಟ, ರಾತ್ರಿ ಎಂಪೈರ್​​ನಲ್ಲಿ ಊಟ, ಮಿಲನೋದಲ್ಲಿ ಐಸ್ ಕ್ರೀಂ ತಿಂದು ನಂತರ ಠಾಣೆಯ ಮೇಲಿರುವ ಕೊಠಡಿಯಲ್ಲಿ ವಾಸವಿದಿದ್ದರೆ ಬೆಳಗ್ಗೆ 8.30ಕ್ಕೆ ಅಲ್ಲ 8 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೆ. ಆದರೆ ನನಗೆ ವಯಸ್ಸಾದ ತಂದೆ-ತಾಯಿ ಇದ್ದಾರೆ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಅವರ ಆಗು ಹೋಗುಗಳನ್ನು ಗಮನಿಸಿ ಠಾಣೆಗೆ ಬರಲು ತಡವಾಗುತ್ತಿದೆ. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಇರುವುದಿಲ್ಲ ಎಂದು ಉತ್ತರಿಸಿದ್ದಾರೆ.

ವೈರಲ್ ಆಯ್ತು ಪೇದೆಯ ಲೆಟರ್​

ABOUT THE AUTHOR

...view details