ಕರ್ನಾಟಕ

karnataka

ಸಿಎಲ್​ಪಿ ಸಭೆಯಲ್ಲಿ ಬಿಸಿಬಿಸಿ ಚರ್ಚೆ: ಅಧಿವೇಶನ ಮುಗಿಸಿ ವಾಪಾಸ್ ಹೋಟೆಲ್​ಗೆ ಬರಲು ಕೈ ಶಾಸಕರಿಗೆ ಸೂಚನೆ

By

Published : Jul 15, 2019, 12:36 PM IST

ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅಧಿವೇಶನ ಮುಗಿಸಿ ವಾಪಾಸ್ ಹೋಟೆಲ್​ಗೆ ಬರಲು ಹಾಗೂ ಬುಧವಾರದ ವರೆಗೂ ಶಾಸಕರು ಹೋಟೆಲ್​ನಲ್ಲೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ.

ಸಿಎಲ್​ಪಿ ಸಭೆ

ಬೆಂಗಳೂರು:ಸಿಎಲ್​​ಪಿ ನಾಯಕ ಸಿದ್ದರಾಮಯ್ಯ ಹಾಗೂ ಉಸ್ತುವಾರಿ ಕೆ ಸಿ ವೇಣುಗೋಪಾಲ್ ನೇತೃತ್ವದಲ್ಲಿ ತಾಜ್ ವಿವಾಂತದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು.

ಅಧಿವೇಶನದಲ್ಲಿ, ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು, ಯಾರೂ ಗೈರು ಹಾಜರಾಗಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ‌ ನಾಳೆ ಸುಪ್ರೀಂ ಕೋರ್ಟ್ ತೀರ್ಪು ಬರಲಿದ್ದು, ತೀರ್ಪಿನ ಆಧಾರದ ಮೇಲೆ ಮುಂದಿನ ಹೆಜ್ಜೆ ಇಡುವುದರ ಬಗ್ಗೆ ಚರ್ಚಿಸಲಾಗಿದ್ದು, ಹೀಗಾಗಿ ಬುಧವಾರದ ವರೆಗೂ ಶಾಸಕರು ಹೋಟೆಲ್​ನಲ್ಲೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ.

ರಾಜೀನಾಮೆ ನೀಡಿರುವ ಶಾಸಕ ರಾಮಲಿಂಗಾ ರೆಡ್ಡಿ ಶಾಸಕಾಂಗ ಸಭೆಗೆ ಬಾರದಿದ್ದರೂ ವಿಧಾನಸೌಧ ಅಧಿವೇಶನಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸೌಮ್ಯ ರೆಡ್ಡಿ, ದಿನೇಶ್ ಗುಂಡೂರಾವ್, ಡಿಕೆಶಿ, ಹೆಚ್ ಕೆ ಪಾಟೀಲ್, ಯು ಟಿ ಖಾದರ್ , ಕೆ.ಜೆ. ಜಾರ್ಜ್ ಭಾಗಿಯಾಗಿದ್ದರು.

ಸಚಿವರು-ಕಾರ್ಯಕರ್ತರ ನಡುವೆ ಮಾತಿನ ಚಕಮಕಿ:

ಸಿಎಲ್​ಪಿ ಸಭೆ ಮುಗಿಸಿ ಹೊರಬಂದ ಸಚಿವ ಪಿ ಟಿ ಪರಮೇಶ್ವರ್ ನಾಯಕ್ ತಮ್ಮ ಕಾರು ಹತ್ತಿ ಹೊರಡಲು ಸಿದ್ಧವಾದಾಗ ಕಾರ್ಯಕರ್ತರು ತಡೆದು, ಎಲ್ಲರೂ ಬಸ್​​ನಲ್ಲೇ ಹೋಗಬೇಕೆಂದು ಒತ್ತಾಯಿಸಿದರು‌. ಆದ್ರೆ ಕೆಲವು ವೈಯಕ್ತಿಕ ಕೆಲಸವಿದ್ದ ಕಾರಣ ಕಾರ್​​ನಲ್ಲೇ ತೆರಳುವುದಾಗಿ ತಿಳಿಸಿ ಸಚಿವರು ಹೋದರು. ಈ ವೇಳೆ ಹೋಟೆಲ್​ ಮುಂದೆ ಗದ್ದಲ, ಗಲಾಟೆ ವಾತಾವರಣ ಸೃಷ್ಟಿಯಾಗಿತ್ತು.

For All Latest Updates

TAGGED:

ABOUT THE AUTHOR

...view details