ಕರ್ನಾಟಕ

karnataka

ETV Bharat / state

ಆಡಿಯೋ ವಿವಾದ: ಸಿಎಂಗೆ ಕೌಂಟರ್​​ ನೀಡಲು ಬಿಜೆಪಿ ಮಾಸ್ಟರ್​ ಪ್ಲಾನ್​​​!? - undefined

ಆಡಿಯೋ ಮುಖಭಂಗಕ್ಕೆ ತಿರುಗೇಟು ನೀಡಲು ಕೇಸರಿಪಡೆ ಸಿದ್ಧತೆ... ಸ್ಪೀಕರ್ ರಮೇಶ್​ಕುಮಾರ್ ವಿರುದ್ಧ ಸಿಎಂ ಹೆಚ್​ಡಿಕೆ ಈ ಮೊದಲು ಮಾಡಿದ್ದ ಆರೋಪ ಪ್ರಸ್ತಾಪಿಸಲು ಬಿಜೆಪಿ ರೆಡಿಯಾಗಿದೆ.

ಸಂಗ್ರಹ ಚಿತ್ರ: ಹೆಚ್​ಡಿಕೆ ಹಾಗೂ ಬಿಎಸ್​ವೈ

By

Published : Feb 12, 2019, 6:21 PM IST

ಬೆಂಗಳೂರು: ಆಡಿಯೋ ಸಿಡಿ ವಿವಾದದಲ್ಲಿ ಸಿಲುಕಿರುವ ಬಿಜೆಪಿ ವಿಧಾನಸಭೆ ಕಲಾಪದಲ್ಲಿ ಸಿಎಂ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಲು ಸಜ್ಜಾಗಿದೆ. ಮುಖ್ಯಮಂತ್ರಿಗಳ ಗೇಮ್ ಪ್ಲಾನ್​ಗೆ ಕೌಂಟರ್ ನೀಡಲು ಕೇಸರಿ ಪಡೆ ತಂತ್ರ ರೂಪಿಸಿದೆ ಎನ್ನಲಾಗಿದೆ.

ಹೌದು, ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಈ ಹಿಂದೆ ಕುಮಾರಸ್ವಾಮಿ ಮಾಡಿರೋ ಆರೋಪಗಳನ್ನ ಪ್ರಸ್ತಾಪಿಸಲು ಬಿಜೆಪಿ ನಿರ್ಧರಿಸಿದೆ. ಈ ಮೂಲಕ ಸಿಎಂ ಹೆಚ್​ಡಿಕೆಯನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದೆ ಎಂದು ಬಿಜೆಪಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.

2013 ರ ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಮೇಶ್ ಕುಮಾರ್ ವಿರುದ್ಧ ಕುಮಾರಸ್ವಾಮಿ 48 ಎಕರೆ ಅರಣ್ಯ ಭೂಮಿ ಭೂ ಕಬಳಿಕೆ ಆರೋಪ ಮಾಡಿ, ಸಮಯ ಬಂದಾಗ ದಾಖಲೆ ಬಿಡುಗಡೆ ಮಾಡೋದಾಗಿ ಹೇಳಿದ್ದರು.

ಆಗ ಹೆಚ್ಚು ಚರ್ಚೆಯಾಗಿದ್ದ ಈ ಸುದ್ದಿಯನ್ನು ಇದೀಗ ಮತ್ತೊಮ್ಮೆ ಪ್ರಸ್ತಾಪಿಸಿ ಸಿಎಂ ವಿರುದ್ಧ ತಿರುಗಿ ಬೀಳಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಈ ಹಿಂದೆ ರಮೇಶ್ ಕುಮಾರ್ ವಿರುದ್ಧ ಮಾಡಿದ್ದ ಆರೋಪಗಳನ್ನೇ ಸಿಎಂ ವಿರುದ್ಧ ಅಸ್ತ್ರವಾಗಿಸಿಕೊಂಡು ಸ್ಪೀಕರ್ ಹಾಗೂ ಸಿಎಂ ಇಬ್ಬರನ್ನೂ ಇಕ್ಕಟ್ಟಿಗೆ ಸಿಲುಕಿಸಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.


For All Latest Updates

TAGGED:

ABOUT THE AUTHOR

...view details