ಕರ್ನಾಟಕ

karnataka

By

Published : Jun 9, 2021, 7:06 PM IST

ETV Bharat / state

ಬೀದರ್ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್​ನ್ನೇ ಕದ್ದ ಖದೀಮರು!

ಬ್ರಿಮ್ಸ್ ಆಸ್ಪತ್ರೆಯ ಹಿಂಬದಿಯ ಕಿಟಕಿಯಿಂದ ಮಂಗಳವಾರ ರಾತ್ರಿ ಕಳ್ಳರು ಎರಡು ವೆಂಟಿಲೇಟರ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಕಳೆದ 4 ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಪತ್ತೆಯಾಗದ್ದಕ್ಕೆ ಖಾಲಿಯಾದ ಕೊರೊನಾ ವಾರ್ಡ್​ನಲ್ಲಿ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.

ವೆಂಟಿಲೇಟರ್ ಕಳವು
ವೆಂಟಿಲೇಟರ್ ಕಳವು

ಬೀದರ್:ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ನಡೆದಿದೆ. ಒಂದೆಡೆ ಕೊರೊನಾ ಪ್ರಕರಣ ಕಡಿಮೆಯಾಗಿವೆ ಎಂಬ ಸಂತಸದ ಸುದ್ದಿ ನಡುವೆ ಕೊರೊನಾ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗ್ತಿದ್ದಂತೆ ಜಿಲ್ಲಾಸ್ಪತ್ರೆಯ ಕೊರೊನಾ ವಾರ್ಡ್​ನತ್ತ ಯಾರೂ ಸುಳಿಯುತ್ತಿಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡ ಖದೀಮರು ಆಸ್ಪತ್ರೆಯಲ್ಲಿನ ಎರಡು ವೆಂಟಿಲೇಟರ್ ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಬ್ರಿಮ್ಸ್ ಆಸ್ಪತ್ರೆಯ ಹಿಂಬದಿಯ ಕಿಟಕಿಯಿಂದ ಕಳೆದ ರಾತ್ರಿ ಕಳ್ಳರು ಎರಡು ವೆಂಟಿಲೇಟರ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಕಳೆದ 4 ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಪತ್ತೆಯಾಗದೆ ಖಾಲಿಯಾದ ಕೊರೊನಾ ವಾರ್ಡ್​ನಲ್ಲಿ ಕಳ್ಳತನವಾಗಿದೆ.

ವೆಂಟಿಲೇಟರ್ ಕಳವು

ಸುಮಾರು 25 ಲಕ್ಷ ರೂ.ನ ಎರಡು ವೆಂಟಿಲೇಟರ್​ಗಳನ್ನು ಎಗರಿಸಿರುವ ಖದೀಮರ ಕೃತ್ಯದಿಂದ ಜಿಲ್ಲಾಸ್ಪತ್ರೆ ಸಿಬ್ಬಂದಿ ದಂಗಾಗಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಭೇಟಿ ನೀಡಿದ್ದು, ಈ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details