ಬೀದರ್: ಮನೆಯ ಮಾಳಿಗೆ ಕುಸಿದ ಪರಿಣಾಮ ಒಂದೇ ಕುಟುಂಬದ ಆರು ಜನ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ನಗರದ ಚಿಲ್ಲಾ ಬಡಾವಣೆಯಲ್ಲಿ ನಡೆದಿದೆ.
ಅಯ್ಯೋ ದುರ್ವಿಧಿಯೇ... ಮನೆ ಮೇಲ್ಛಾವಣಿ ಕುಸಿದು ಬೀದರ್ನಲ್ಲಿ ಒಂದೇ ಕುಟುಂಬದ ಆರು ಜನ ಸಾವು - kannada nes,etv bharat,Six , same family, died, house roof collapse,ಮನೆಯ ಮೆಲ್ಛಾವಣಿ ಕುಸಿತ, ಒಂದೇ ಕುಟುಂಬ, ಆರು ಜನರ ಸಾವು,
ಇಂದು ನಸುಕಿನ ಜಾವ ಬೀದರ್ ಜಿಲ್ಲೆಯಲ್ಲಿ ಭಾರಿ ದುರಂತ ಸಂಭವಿಸಿದೆ. ದಿಢೀರ್ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಗಾಢ ನಿದ್ರೆಯಲ್ಲಿದ್ದ ಒಂದೇ ಕುಟುಂಬದ ಆರು ಜನ ಮೃತಪಟ್ಟಿದ್ದಾರೆ.
![ಅಯ್ಯೋ ದುರ್ವಿಧಿಯೇ... ಮನೆ ಮೇಲ್ಛಾವಣಿ ಕುಸಿದು ಬೀದರ್ನಲ್ಲಿ ಒಂದೇ ಕುಟುಂಬದ ಆರು ಜನ ಸಾವು](https://etvbharatimages.akamaized.net/etvbharat/prod-images/768-512-3666033-thumbnail-3x2-megha.jpg)
ಒಂದೇ ಕುಟುಂಬದ ಆರು ಜನರ ದಾರುಣ ಸಾವು
ಇಂದು ನಸುಕಿನಜಾವ ದಿಢೀರ್ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಗಾಢ ನಿದ್ರೆಯಲ್ಲಿದ್ದ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಳೆ ಮನೆಯೊಂದರ ಮಣ್ಣಿನ ಮಾಳಿಗೆ ಕುಸಿದು ಈ ದುರಂತ ಸಂಭವಿಸಿದೆ. ನದೀಮ್ ಶೇಕ್ ಯುಸೂಬ್ ಶೇಕ್ (45), ಇವರ ಪತ್ನಿ ಫರೀದಾ ಬೇಗ್ಂ (34), ಮಕ್ಕಳಾದ ಆಯುಷಾ ಬಾನು (15), ಮೇಹತಾಬಿ (14), ಫಜಾನಲಿ (09) ಹಾಗೂ ಫರಾನ್ ಅಲಿ (05) ದುರಂತದಲ್ಲಿ ಮೃತಪಟ್ಟವರು.
ಒಂದೇ ಕುಟುಂಬದ ಆರು ಜನರ ದಾರುಣ ಸಾವು
ಸ್ಥಳಕ್ಕೆ ಪೊಲೀಸರು, ನಗರಸಭೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯಿಂದ ಬಡಾವಣೆಯಲ್ಲಿ ನೀರವ ಮೌನ ಆವರಿಸಿದೆ.
Last Updated : Jun 26, 2019, 12:50 PM IST
TAGGED:
six people killed