ಕರ್ನಾಟಕ

karnataka

ETV Bharat / state

ಸಂಕಷ್ಟಕ್ಕೆ ಸಿಲುಕಿದ್ದ ಸ್ವ- ಸಹಾಯ ಸಂಘಗಳು: ಪುನಶ್ಚೇತನಕ್ಕಾಗಿ ನೆರವಿನ ಚೆಕ್​​ ನೀಡಿದ ಸಚಿವ ಸೋಮಶೇಖರ್ - ಸಂಕಷ್ಟಕ್ಕೆ ಸಿಲುಕಿದ್ದ ಸ್ವ- ಸಹಾಯ ಸಂಘಗಳು

ಬೀದರ್​​ನಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು, ಆರ್ಥಿಕ ಸ್ಪಂದನ ಹಾಗೂ ಸ್ವಸಹಾಯ ಸಂಘಗಳ ದಿನಾಚರಣೆ ಉದ್ಘಾಟನೆ ಮಾಡಿದ್ರು. ಈ ಕಾರ್ಯಕ್ರಮದಲ್ಲಿ ಆರ್ಥಿಕ ಸಂಕಷ್ಟಕ್ಕೀಡಾದ ಸ್ವ-ಸಹಾಯ ಸಂಘಗಳ ಸಬಲೀಕರಣಕ್ಕಾಗಿ ನೆರವಿನ ಚೇಕ್ ವಿತರಣೆ ಮಾಡಿದರು.

ಪುನಶ್ಚೇತನಕ್ಕಾಗಿ ನೆರವಿನ ಚೆಕ್​​ ನೀಡಿದ ಸಚಿವ ಸೋಮಶೇಖರ್
ಪುನಶ್ಚೇತನಕ್ಕಾಗಿ ನೆರವಿನ ಚೆಕ್​​ ನೀಡಿದ ಸಚಿವ ಸೋಮಶೇಖರ್

By

Published : Nov 11, 2020, 8:23 PM IST

ಬೀದರ್:ಕೋವಿಡ್-19 ಸೋಂಕಿನಿಂದ ಆರ್ಥಿಕ ಸಂಕಷ್ಟಕ್ಕೀಡಾದ ಸ್ವ-ಸಹಾಯ ಸಂಘಗಳ ಸಬಲೀಕರಣಕ್ಕಾಗಿ ಸರ್ಕಾರ, ಸಹಕಾರ ಇಲಾಖೆಯ ವಿವಿಧ ಯೋಜನೆಗಳ ಅಡಿಯಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಆರ್ಥಿಕ ನೆರವಿಗಾಗಿ ಚೆಕ್​​ ವಿತರಿಸಿದರು.

ನಗರದ ಲಿಂ.ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಆರ್ಥಿಕ ಸ್ಪಂದನ ಹಾಗೂ ಸ್ವಸಹಾಯ ಸಂಘಗಳ ದಿನಾಚರಣೆ ಉದ್ಘಾಟನೆ ಮಾಡಿದ ಸಚಿವ ಎಸ್.ಟಿ ಸೋಮಶೇಖರ್ ಅವರು, ರಾಜ್ಯದ ಸಹಕಾರ ಕ್ಷೇತ್ರದಲ್ಲಿ ದಿ.ಗುರುಪಾದಪ್ಪ ನಾಗಮಾರಪಳ್ಳಿ ಅವರ ಕೊಡುಗೆ ಅಪಾರವಾಗಿದೆ. ಸ್ವ ಸಹಾಯ ಸಂಘಗಳ ಮೂಲಕ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸವಬಲೀಕರಣಕ್ಕೆ ಹಾದಿ ಮಾಡಿಕೊಟ್ಟಿದ್ದಾರೆ ಎಂದರು.

ಸ್ವ- ಸಹಾಯ ಸಂಘಗಳ ಪುನಶ್ಚೇತನಕ್ಕಾಗಿ ನೆರವಿನ ಚೆಕ್​​ ನೀಡಿದ ಸಚಿವ ಸೋಮಶೇಖರ್

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಭಗವಂತ ಖೂಬಾ, ಶಾಸಕರಾದ ರಹಿಂಖಾನ್ ಪರಿಷತ್ ಸದಸ್ಯ ಅರವಿಂದ ಅರಳಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಈ ವೇಳೆಯಲ್ಲಿ ವಿವಿಧ ಸ್ವಸಹಾಯ ಸಂಘಗಳಿ ಮುಖ್ಯಸ್ಥರಿಗೆ ನೆರವಿನ ಚೆಕ್ ವಿತರಣೆ ಮಾಡಿದರು.

ABOUT THE AUTHOR

...view details