ಬೀದರ್: ನಗರದ ಗಾಂಧಿಗಂಜ್ ಪಿಎಸ್ಐ ಸೇರಿ ಏಳು ಜನ ಕೊರೊನಾ ವಾರಿಯರ್ಸ್ ಕೊರೊನಾದಿಂದ ಗುಣಮುಖರಾಗಿ ವಾಪಸ್ಸಾಗಿದ್ದಾರೆ.
ಬೀದರ್: ಕೊರೊನಾ ಗೆದ್ದು ಬಂದ ವಾರಿಯರ್ಸ್ಗೆ ಹೂಮಳೆಯ ಸ್ವಾಗತ - ಬೀದರ್ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ
ಬೀದರ್ ನಗರದ ಗಾಂಧಿಗಂಜ್ ಪಿಎಸ್ಐ ಸೇರಿ 7 ಜನ ಕೊರೊನಾ ವಾರಿಯರ್ಸ್ ಕೊರೊನಾದಿಂದ ಗುಣಮುಖರಾಗಿ ವಾಪಸ್ಸಾಗಿದ್ದಾರೆ.
ಕೊರೊನಾ ಗೆದ್ದು ಬಂದ ವಾರಿಯರ್ಸ್ಗೆ ಹೂ ಚೆಲ್ಲಿ ಸ್ವಾಗತ
ನಗರದ ಝೀರಾ ಕನ್ವೆನ್ಶನ್ ಹಾಲ್ ಮುಖ್ಯದ್ವಾರದಲ್ಲಿ ಕೊರೊನಾ ಗೆದ್ದು ಬಂದವರಿಗೆ ಹೂ ಚೆಲ್ಲುವ ಮೂಲಕ ಸ್ವಾಗತಿಸಿದ್ದಾರೆ. ನಂತರ ಸಾಂಸ್ಥಿಕ ಕ್ವಾರಂಟೈನ್ನಿಂದ ಹೋಮ್ ಕ್ವಾರೆಂಟೈನ್ಗಾಗಿ ಕಳುಹಿಸಲಾಯಿತು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್, ಡಿವೈಎಸ್ ಪಿ ಬಸವೇಶ್ವರ ಹೀರಾ ಸಿಬ್ಬಂದಿಗೆ ತಮ್ಮ ಆರೋಗ್ಯದ ಬಗ್ಗೆ ಗಮನವಹಿಸಿ ಎಂದು ಸಲಹೆ ನೀಡಿದರು.