ಕರ್ನಾಟಕ

karnataka

ETV Bharat / state

MLC Election.. ಖೂಬಾ - ಪಾಟೀಲ್ ನಡುವೆ ವಾಕ್ಸಮರ

ಗಡಿ ಜಿಲ್ಲೆ ಬೀದರ್​​ನಲ್ಲಿ ಪರಿಷತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗಿದ್ದು, ಹಿರಿಯ ನಾಯಕರ ನಡುವೆ ವೈಯಕ್ತಿಕ ಆರೋಪ - ಪ್ರತ್ಯಾರೋಪಕ್ಕೆ ವೇದಿಕೆಯಾಗಿದೆ.

By

Published : Dec 4, 2021, 5:22 PM IST

rajashekara patil and bhagavanta khooba criticize each other
ಖೂಬಾ-ಪಾಟೀಲ್ ನಡುವೆ ವಾಕ್ಸಮರ

ಬೀದರ್: ಐದು ಲಕ್ಷ ರೂಪಾಯಿ ಮೌಲ್ಯದ ಕನ್ನಡಕ ಹಾಕಿಕೊಳ್ಳುವ ಶಾಸಕ ರಾಜಶೇಖರ್ ಪಾಟೀಲ್, ಈಶ್ವರ ಖಂಡ್ರೆ ಅವರು ಬಡವರ ಬಗ್ಗೆ ಮಾತನಾಡಲಿಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಖೂಬಾ ಗರಂ ಆಗಿದ್ದರೆ, ಮತ್ತೊಂದೆಡೆ ಮನೆ ಒಡುಕುತನ ಮಾಡುವುದು ಖೂಬಾ ಕೆಲಸ ಎಂದು ಶಾಸಕ ರಾಜಶೇಖರ ಪಾಟೀಲ್ ಏಕವಚನದಲ್ಲಿ ಟಾಂಗ್ ನೀಡಿದ್ದಾರೆ.

ಗಡಿ ಜಿಲ್ಲೆ ಬೀದರ್​​ನಲ್ಲಿ ಪರಿಷತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗಿದ್ದು, ಹಿರಿಯ ನಾಯಕರ ನಡುವೆ ವೈಯಕ್ತಿಕ ಆರೋಪ - ಪ್ರತ್ಯಾರೋಪಕ್ಕೆ ವೇದಿಕೆಯಾಗಿದೆ. ರಾಜಶೇಖರ ಪಾಟೀಲ್ ಏಕವಚನದಲ್ಲೇ ಬಿಜೆಪಿ ನಾಯಕರ ವಿರುದ್ಧ ವೈಯಕ್ತಿಕ ವಾರ್ ನಡೆಸಿದ್ರೆ, ಕಾಂಗ್ರೆಸ್ ನಾಯಕರ ವಿರುದ್ಧ ಸಂಸದ ಖೂಬಾ ಕೂಡ ಟೀಕಾ ಪ್ರಹಾರ ಮಾಡಿದ್ದಾರೆ.

ಖೂಬಾ-ಪಾಟೀಲ್ ನಡುವೆ ವಾಕ್ಸಮರ

ಒಂದು ಕಡೆ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಕಾಂಗ್ರೆಸ್ ಟೀಕೆ ಮಾಡುತ್ತಿದ್ದರೆ, ಕಾಂಗ್ರೆಸ್ ಕೈ ಹಿಡಿದರೆ ನಿಮಗೆ ಏನೂ ಸಿಗಲ್ಲ. ನಾವು ಗೆದ್ದರೆ ಎಲ್ಲ ಯೋಜನೆಗಳು ನಿಮ್ಮ ಗ್ರಾಮದವರೆಗೂ ಬರುತ್ತವೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಇಷ್ಟು ದಿನ ಕೇವಲ ರಾಜಕೀಯವಾಗಿ ಕಿತ್ತಾಡುತ್ತಿದ್ದ ನಾಯಕರ ಮಧ್ಯೆ ಈಗ ವೈಯಕ್ತಿಕ ವಾರ್ ಶುರುವಾಗಿದೆ.

ರಾಜಶೇಖರ ಪಾಟೀಲ್ ಸವಾಲು:

ಸಚಿವ ಖೂಬಾ ವಿರುದ್ಧ ಮಾಜಿ ಸಚಿವ ರಾಜಶೇಖರ ಪಾಟೀಲ್​ ಟೀಕೆ ಮಾಡಿದ್ದಾರೆ. ಈವರೇನು ಹೈಕಮಾಂಡ್​ ರೀತಿ ಆಡುತ್ತಿದ್ದಾರೆ. ಎರಡು ಬಾರಿ ಸಂಸದರಾಗಿ ಈಗ ಕೇಂದ್ರ ಸಚಿವರಾಗಿ ಹೊಸ ಹೊಸ ಶರ್ಟ್​​ಗಳನ್ನು ಹಾಕಿಕೊಂಡು ಕಲರ್ ಕಲರ್ ಕಾಗೆ ಹಾರಿಸುತ್ತಿದ್ದಾರೆ. ಜಿಲ್ಲೆಗೆ ಇವರ ಕೊಡುಗೆ ಏನಿದೆ ಹೇಳಲಿ. ಬೇಕಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.

ಪಾಟೀಲ್ ಹೇಳಿಕೆಗಳಿಗೆ ಖೂಬಾ ತೀರುಗೇಟು:

ಇನ್ನು ಪಾಟೀಲ್ ಹೇಳಿಕೆಗಳಿಗೆ ತೀರುಗೇಟು ನೀಡಿದ ಸಂಸದ ಖೂಬಾ ಗ್ರಾಮ ಪಂಚಾಯತ್​​ಗಳಲ್ಲಿ ಅತಿಹೆಚ್ಚು ಅನುದಾನ ಕೊಟ್ಟಿದ್ದು ಬಿಜೆಪಿ ಪಕ್ಷ. 3,400 ಪೈಕಿ 2,800 ಸದಸ್ಯರು ಸಭೆಯಲ್ಲಿ ಭಾಗವಹಿಸಿ ನಮ್ಮ ಅಭ್ಯರ್ಥಿಗೆ ಬೆಂಬಲಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಆಡಳಿತದಲ್ಲಿರುವ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕೆಂದು ಸದಸ್ಯರು ನಿರ್ಧರಿಸಿದ್ದಾರೆ. ಕಾಂಗ್ರೆಸ್ ನವರಿಗೆ ಚುನಾವಣೆಗಿಂತ ನಮ್ಮ ಬಗ್ಗೆ ಯೋಚನೆ ಮಾಡೋದೇ ಹೆಚ್ಚಾಗಿದೆ.

ಮೈ ಮುಚ್ಚಿಕೊಳ್ಳಲು ಬಟ್ಟೆ ಹಾಕಿಕೊಳ್ಳಬೇಕಾಗುತ್ತದೆ. ರಾಜಶೇಖರ್ ಪಾಟೀಲ್ ಮತ್ತು ಈಶ್ವರ ಖಂಡ್ರೆ ಖಂಡ್ರೆ ಲಕ್ಷಾಂತರ ರೂಪಾಯಿ ಮೌಲ್ಯದ "ರೆಬೆಲ್​​ ಗ್ಲಾಸ್" ಹಾಕಿಕೊಳ್ಳುತ್ತಾರೆ. ಪಾಟೀಲ್ ಅವರ ಮನೆ ಒಡೆಯುವ ಕೆಲಸ ಈಶ್ವರ ಖಂಡ್ರೆ ಮಾಡಿದ್ದಾರೆ. ನಮ್ಮದು ಜನ ಒಪ್ಪಿಕೊಳ್ಳುವಂತಹ ಒಳ್ಳೆಯ ಪಕ್ಷ. ನಮ್ಮ ಅಭ್ಯರ್ಥಿ ಕೂಡ ಒಳ್ಳೆಯವರು ಎಂದು ಜನ ಒಪ್ಪಿಕೊಂಡಿದ್ದಾರೆ. ಸೋಲಿನ ಭೀತಿಯಿಂದ ಹೀಗೆ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಯಾವುದಾದರೂ ಕಟ್ಟಡ ಅಥವಾ ರಸ್ತೆಗೆ ನಟ ಶಿವರಾಮ್ ಹೆಸರು ಇಡುತ್ತೇವೆ: ಆರ್.ಅಶೋಕ್

ಒಟ್ಟಿನಲ್ಲಿ ಗಡಿ ಜಿಲ್ಲೆಯಾದ ಬೀದರ್​ನಲ್ಲಿ ಪರಿಷತ್ ಚುನಾವಣೆ ಕಾವು ವೈಯಕ್ತಿಕ ಕತ್ತಾಟಕ್ಕೆ ವೇದಿಕೆಯಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷದ ಪ್ರಚಾರ ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ದಂಡು ಹರಿದು ಬರುತ್ತಿದೆ.

ABOUT THE AUTHOR

...view details